
ನಾಯಕತ್ವ ಬದಲಾವಣೆಯ ಮಧ್ಯೆ ಸಚಿವ ಸಂಪುಟ ಸಭೆ: ಮೌನ ಮುರಿತಾರಾ ಬಿಎಸ್ವೈ..?
* ಸಾಕಷ್ಟು ಕುತೂಹಲ ಮೂಡಿಸಿದ ಸಚಿವ ಸಂಪುಟ ಸಭೆ
* ಬದಲಾವಣೆಯ ಕುರಿತು ಸುಳಿವು ನೀಡುವಂತಹ ಸಾಧ್ಯತೆ
* ಸಿಎಂ ನಡೆ ಬಗ್ಗೆ ಕೇಸರಿ ಪಾಳಯದಲ್ಲೂ ಕೂಡ ಬಹಳ ಕುತೂಹಲ
ಬೆಂಗಳೂರು(ಜು.22): ನಾಯಕತ್ವ ಬದಲಾವಣೆ ಚರ್ಚೆಯ ಮಧ್ಯೆ ಸಚಿವ ಸಂಪುಟ ಇಂದು(ಗುರುವಾರ) ಸಂಜೆ 4 ಗಂಟೆಗೆ ನಡೆಯಲಿದೆ. ಈ ಸಭೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡುತ್ತಿದೆ. ನಾಯಕತ್ವ ಬದಲಾವಣೆಯ ಕುರಿತು ಸುಳಿವು ನೀಡುವಂತಹ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದಿನ ಸಭೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೌನ ಮುರಿತಾರಾ ಎಂಬುದನ್ನು ಕಾದುನೋಡಬೇಕಿದೆ. ಸಿಎಂ ನಡೆ ಬಗ್ಗೆ ಕೇಸರಿ ಪಾಳಯದಲ್ಲೂ ಕೂಡ ಬಹಳ ಕುತೂಹಲ ಕೆರಳಿಸಿದೆ.
Add Asianetnews Kannada as a Preferred Source
