
ಮಲೆನಾಡಿಗೆ ಬಿಎಸ್ವೈ ಒಂದು ಕಾಣಿಕೆ: ಸಿಎಂ ಬೊಮ್ಮಾಯಿ ಬಣ್ಣನೆ
ಮಲೆನಾಡ ಪ್ರದೇಶಕ್ಕೆ ಯಡಿಯೂರಪ್ಪ ಒಂದು ಕಾಣಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಮ್ಮ ನಾಯಕರಾದ ಯಡಿಯೂರಪ್ಪರ ಕನಸು ನನಸಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಿವಮೊಗ್ಗ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಮಲೆನಾಡ ಅಭಿವೃದ್ಧಿಗೆ ಯಡಿಯೂರಪ್ಪ ಬಹಳ ಶ್ರಮಿಸಿದ್ದಾರೆ ಎಂದರು. ಬಿಎಸ್ವೈ ಹುಟ್ಟುಹಬ್ಬದಂದೇ ವಿಮಾನ ನಿಲ್ದಾಣ ಉದ್ಘಾಟನೆ ಆಗ್ತಿರೋದು ದೈವೇಚ್ಛೆ ಎಂದರು. ಮಲೆನಾಡು ಆರ್ಥಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಸಹಾಯವಾಗಲಿದೆ, ಇದಕ್ಕೆ ಮತ್ತೊಂದು ಕಾರಣ ಪ್ರಧಾನಿ ಬಹಳ ದೊಡ್ಡ ಕ್ರಾಂತಿ ಮಾಡಿದ್ದಾರೆ. ಅತಿ ಹೆಚ್ಚು ಏರ್ಪೋರ್ಟ್ ಮೋದಿ ಅವಧಿಯಲ್ಲಿ ಆಗಿದೆ ಎಂದರು.
Add Asianetnews Kannada as a Preferred Source
