
ಗೌಡರ ಒಡ್ಡೋಲಗದಲ್ಲಿ ಬದ್ಧವೈರಿಗಳ ಸಂಗಮ; ಕನಕಾಧಿಪತಿ ನಡೆ ಮೆಚ್ಚಿದ ದಳಪತಿ
ಜಾತಿ ಗಣತಿ ವರದಿಯ ವಿರುದ್ಧ ಒಕ್ಕಲಿಗ ಸಮುದಾಯವು ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಸೇರಿದೆ. ಈ ಸಭೆಯಲ್ಲಿ ಬದ್ಧವೈರಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಒಂದಾಗಿದ್ದು, ಡಿಕೆಶಿ ಅವರ ದೆಹಲಿ ಪ್ರವಾಸ ಮತ್ತು ರಾಜ್ಯಪಾಲರ ಪ್ರವೇಶವು ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಜಾತಿ ದಂಗಲ್ ಮಧ್ಯೆ ನಡೆದ ಗೌಡರ ಒಡ್ಡೋಲಗ.. ಬದ್ಧವೈರಿಗಳ ಸಂಗಮಕ್ಕೆ ಸಾಕ್ಷಿಯಾದ ಸಭೆ..! ಜಾತಿ ಜ್ವಾಲೆಯಲ್ಲಿ ಧಗಧಗಿಸಿತು ಒಕ್ಕಲಿಗ ರೋಷಾಗ್ನಿ..! ಒಕ್ಕಲಿಗ ಕೋಟೆಗೆ ಕಟ್ಟಪ್ಪನ ಕಾವಲು..! ಬಲ ಪ್ರದರ್ಶನವೋ..ಬಲಾಬಲ ಪ್ರದರ್ಶನವೋ..? ಜಾತಿ ಸಾಮ್ರಾಜ್ಯ ಛಿದ್ರವಾಗದಂತೆ ಒಕ್ಕಲಿಗ ಸಮುದಾಯ ಹೆಣೆದಿರೋದೆಂತಹ ಚತುರವ್ಯೂಹ..? ಸ್ವಾಮೀಜಿಗಳ ನೇತೃತ್ವದ ಸಭೆಯಲ್ಲಿ ಹೊರಬಿದ್ದ ತೀರ್ಮಾನಗಳೇನು..?