Asianet Suvarna News Asianet Suvarna News

ಖಾತೆ ಹಂಚಿಕೆ ಅಸಮಾಧಾನ, ಸ್ಥಾನ ವಂಚಿತರ ಅತೃಪ್ತಿ: ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ

ರಾಜ್ಯ ಬಿಜೆಪಿಯಲ್ಲಿ ಅತೃಪ್ತರ ಅಸಮಾಧಾನ ಇನ್ನೂ ನಿಂತಿಲ್ಲ. ಖಾತೆ ಹಂಚಿಕೆ ಅಸಮಾಧಾನ, ಸಚಿವ ಸ್ಥಾನ ವಂಚಿತರ ಅತೃಪ್ತಿ ಮುಂದುವರೆದಿದೆ. ಅಸಮಾಧಾನತರ ಮನವೊಲಿಸುವಲ್ಲಿ ಸಿಎಂ ಬೊಮ್ಮಾಯಿ ಹೈರಾಣಾಗಿದ್ದಾರೆ. 

ಬೆಂಗಳೂರು (ಆ. 13): ರಾಜ್ಯ ಬಿಜೆಪಿಯಲ್ಲಿ ಅತೃಪ್ತರ ಅಸಮಾಧಾನ ಇನ್ನೂ ನಿಂತಿಲ್ಲ. ಖಾತೆ ಹಂಚಿಕೆ ಅಸಮಾಧಾನ, ಸಚಿವ ಸ್ಥಾನ ವಂಚಿತರ ಅತೃಪ್ತಿ ಮುಂದುವರೆದಿದೆ. ಅಸಮಾಧಾನತರ ಮನವೊಲಿಸುವಲ್ಲಿ ಸಿಎಂ ಬೊಮ್ಮಾಯಿ ಹೈರಾಣಾಗಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್, ನೆಹರು ಹುಕ್ಕಾಬಾರ್ ತೆರೆಯಲಿ: ಸಿ.ಟಿ ರವಿ ಸವಾಲ್

ಇದೀಗ ಅಸಮಾಧಾನ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಆಗಸ್ಟ್ 15 ರ ಬಳಿಕ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿದೆ. ಅಸಮಾಧಾನಿತರ ಜೊತೆ ಚರ್ಚೆ ನಡೆಸಿ ಬಿಕ್ಕಟ್ಟಿಗೆ ಪೂರ್ಣ ವಿರಾಮ ಹಾಕುವ ಸಾಧ್ಯತೆ ಇದೆ. ಇನ್ನು ರಾಜ್ಯ ಬಿಜೆಪಿ ನಾಯಕರ ಪದೇ ಪದೇ ದೆಹಲಿ ಭೇಟಿಗೆ ಕಡಿವಾಣ ಹಾಕುವ ಸಾಧ್ಯತೆ ಇದೆ. ಇನ್ನು ವಿವಿಧ ಜಿಲ್ಲೆಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ. ಇನ್ನು ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೂ ತಂತ್ರ ರೂಪಿಸಲಿದ್ದಾರೆ. 

Video Top Stories