ನಿರ್ಧಾರ ಬದಲಿಸಿದ ಸಿಎಂ, ಪುನಾರಚನೆ ಬದಲು ವಿಸ್ತರಣೆ, ಯಾರಿಗೆ ಅದೃಷ್ಟ?
ಆಗಸ್ಟ್ ನಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ/ ಹಿರಿಯ ಸಚಿವರಿಗೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ/ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?
ಬೆಳಗಾವಿ(ಜು. 30) ಸಂಪುಟ ಪುನಾರಚನೆ ಬದಲು ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಆಗಸ್ಟ್ ನಲ್ಲಿ ಸಂಪುಟ ವಿಸ್ತರಣೆ ಪಕ್ಕಾ ಎಂದು ಹಿರಿಯ ಸಚಿವರ ಬಳಿ ಯಡಿಯೂರಪ್ಪ ಹೇಳಿದ್ದಾರೆ.
ಹೊಸ ಕ್ಯಾಬಿನೆಟ್ ಲೆಕ್ಕಾಚಾರ, ಯಾರು ಔಟ್, ಯಾರು ಇನ್?
ಹಿರಿಯ ಸಚಿವರಿಗೆ ಸಿಎಂ ಸುಳಿವು ಕೊಟ್ಟಿದ್ದಾರೆ. ವಿಧಾನ ಪರಿಷತ್ ಗೆ ಹೊಸದಾಗಿ ಬಿಜೆಪಿಯಿಂದ ಹೊಸಬರು ಅವಕಾಶ ಪಡೆದಿದ್ದಾರೆ. ಸಿಎಂಗೆ ಮುಂದಿನ ದಿನದಲ್ಲಿ ವಿಸ್ತರಣೆ ಒಂದು ಸವಾಲಾಗಬಹುದು.