Asianet Suvarna News Asianet Suvarna News

ಶಾಸಕರ ಜೊತೆ ಬಿಎಲ್ ಸಂತೋಷ್ ಸಭೆ, ಅಚ್ಚರಿ ಮೂಡಿಸಿದೆ ರಾಜಕೀಯ ನಡೆ

- ಶಾಸಕರ ಜೊತೆ ಬಿಎಲ್ ಸಂತೋಷ್ ಮಾತುಕತೆ

- ಸರ್ಕಾರದ ಕಾರ್ಯವೈಖರಿ ಬಗ್ಗೆ ಚರ್ಚೆ 

- ಉಪಚುನಾವಣೆ ಲೋಪದೋಷಗಳ ಬಗ್ಗೆ ಚರ್ಚೆ

ಬೆಂಗಳೂರು (ಮೇ. 14): ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಶಾಸಕರನ್ನು ಕರೆದು ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ. ಈ ನಡೆ ಕುತೂಹಲ ಮೂಡಿಸಿದೆ. ಸರ್ಕಾರದ ಬಗ್ಗೆ ತಳಹಂತದ ಕಾರ್ಯಕರ್ತರ ಬಗ್ಗೆ ಶಾಸಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉಪಚುನಾವಣೆಯ ಲೋಪಗಳ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಚರ್ಚೆ ಬಗ್ಗೆ ಬಿಜೆಪಿಯಲ್ಲಿಯೂ ಚರ್ಚೆ ವ್ಯಕ್ತವಾಗಿದೆ.