Asianet Suvarna News Asianet Suvarna News

ವರುಣದಲ್ಲಿ 'ಟಗರು' ಕಟ್ಟಿಹಾಕಲು ಬಿಜೆಪಿ ಪ್ಲ್ಯಾನ್‌: ಸೋಮಣ್ಣ ಪರ ಸ್ಟಾರ್‌ ಪ್ರಚಾರಕರ ಕ್ಯಾಂಪೇನ್‌

ವರುಣದಲ್ಲಿ ಕಮಲ ಸೇನಾನಿ ಪಡೆ ಅಬ್ಬರ
ಕ್ಷೇತ್ರದೆಲ್ಲೆಡೆ ಸ್ಟಾರ್‌ ಪ್ರಚಾರಕರ ಸಂಚಾರ
ತವರಲ್ಲೇ ಸಿದ್ದು ಕಟ್ಟಿಹಾಕಲು ಬಿಜೆಪಿ ಪ್ಲ್ಯಾನ್‌

First Published Apr 27, 2023, 11:47 AM IST | Last Updated Apr 27, 2023, 11:47 AM IST

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ವರುಣದಲ್ಲಿ ಸೋಲಿಸಲು ಕೇಸರಿ ಪಡೆ ಮುಗಿಬಿದ್ದಿದೆ. ಈ ಹಿನ್ನೆಲೆ ಬಿಜೆಪಿಯಿಂದ ಸ್ಟಾರ್‌ ಪ್ರಚಾರಕರು ಅಖಾಡಕ್ಕೆ ಇಳಿಯಲಿದ್ದಾರೆ.  ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಬಿ.ಎಸ್‌.ಯಡಿಯೂರಪ್ಪ ಹಾಗೂ ನಟ ಸುದೀಪ್‌ ಪ್ರಚಾರ ಮಾಡಲಿದ್ದಾರೆ. ಸುದೀಪ್‌ ಹಳ್ಳಿ ಹಳ್ಳಿಗಳಿಗೆ ತೆರಳಿ ಕ್ಯಾಂಪೇನ್‌ ನಡೆಸಲಿದ್ದಾರೆ. ಇವರಷ್ಟೇ ಅಲ್ಲದೇ ಪ್ರಧಾನಿ ಮೋದಿ, ಅಮಿತ್‌ ಶಾ ಸಹ ವರುಣದಲ್ಲಿ ಪ್ರಚಾರ ಮಾಡಲಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಸಿದ್ದರಾಮಯ್ಯನವರನ್ನು ಸೋಲಿಸಲು, ಬಿಜೆಪಿ ಪಣತೊಟ್ಟಂತೆ ಕಾಣುತ್ತದೆ.

ಇದನ್ನೂ ವೀಕ್ಷಿಸಿ: ವರುಣಾದಲ್ಲಿ ಸಿದ್ದರಾಮಯ್ಯರನ್ನ ಸೋಲಿಸ್ತಾರಾ ಸಚಿವ ಸೋಮಣ್ಣ ..?