Asianet Suvarna News Asianet Suvarna News

ಕೇಸರಿ ಪಡೆಯಲ್ಲಿ ‘ಮೈತ್ರಿ’ ಮುನಿಸು : ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವ ನಾಯಕರು

ಬಿಜೆಪಿ- ಜೆಡಿಎಸ್‌ ಮೈತ್ರಿಗೆ ಸೋಮಶೇಖರ್, ಸದಾನಂದಗೌಡ  ಹಾಗೂ ವಿ.ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.
 

ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ದಿನಕ್ಕೊಂದು ನಾಯಕರಿಂದ ಬಹಿರಂಗ ಹೇಳಿಕೆಗಳು ಬರುತ್ತಿವೆ. ಮೈತ್ರಿ ಬಗ್ಗೆ ಬಿಜೆಪಿ(BJP) ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಸ್‌ ಟಿ ಸೋಮಶೇಖರ್(ST Somashekhar), ಸದಾನಂದಗೌಡ(Sadananda Gowda) ಬಳಿಕ ಸೋಮಣ್ಣ(V Somanna) ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿ ವಿರುದ್ಧವೇ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ವಿಧಾನಸಭೆ ಚುನವಣೆ ಸೋಲಿನ ಬಳಿಕ ಈ ಅಸಮಾಧಾನ ಹೊರಬರುತ್ತಿದೆ. ಹೈಕಮಾಂಡ್ ನಿರ್ಧಾರದ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದು, ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಬಹಿರಂಗವಾಗಿಯೇ ರಾಜ್ಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ರಾಜ್ಯದ ಕೆಲ ರಾಜಕಾರಣಿಗಳು ಜೈಲು ಸೇರ್ತಾರೆ: ಸ್ಫೋಟಕ ಭವಿಷ್ಯ ನುಡಿದ ಯಶ್ವಂತ ಗುರೂಜಿ..!

Video Top Stories