Asianet Suvarna News Asianet Suvarna News

ಬೆಂಗಳೂರು ಉಸ್ತುವಾರಿಗೆ ಸಚಿವರ ಮಧ್ಯೆ ಬಿಗ್​​ ಫೈಟ್: ಬೊಮ್ಮಾಯಿ ಖಡಕ್ ಸ್ಪಷ್ಟನೆ

ರಾಜ್ಯ ರಾಜಧಾನಿ ಬೆಂಗಳೂರು ಉಸ್ತುವಾರಿಗಾಗಿ ಕಂದಾಯ ಸಚಿವ ಆರ್​​. ಅಶೋಕ್​​​ ಮತ್ತು ವಸತಿ ಸಚಿವ ವಿ. ಸೋಮಣ್ಣ ನಡುವೆ ಬೀದಿ ಕಾಳಗ ಶುರುವಾಗಿದೆ. ಇನ್ನು ಈ ಬೆಂಗಳೂರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, (ಅ.10): ರಾಜ್ಯ ರಾಜಧಾನಿ ಬೆಂಗಳೂರು ಉಸ್ತುವಾರಿಗಾಗಿ ಕಂದಾಯ ಸಚಿವ ಆರ್​​. ಅಶೋಕ್​​​ ಮತ್ತು ವಸತಿ ಸಚಿವ ವಿ. ಸೋಮಣ್ಣ ನಡುವೆ ಬೀದಿ ಕಾಳಗ ಶುರುವಾಗಿದೆ.

ನಾವ್ ಬೇರೆ ಪಕ್ಷದಿಂದ ಬಂದೋರು : ಅಶೋಕ್‌ ಪರ STS ಬ್ಯಾಟಿಂಗ್

ಈ ಹಿಂದೆ ಸಚಿವ ಡಾ. ಸಿ.ಎನ್​​ ಅಶ್ವತ್ಥ್ ನಾರಾಯಣ್ ಮತ್ತು ಆರ್​​. ಅಶೋಕ್​​ ನಡುವೆ ಬೆಂಗಳೂರು ಉಸ್ತುವಾರಿಗಾಗಿ ಫೈಟ್​​ ನಡೆಯುತ್ತಿತ್ತು. ಈಗ ವಿ. ಸೋಮಣ್ಣ ಎಂಟ್ರಿ ನೀಡಿದ್ದು, ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇನ್ನು ಈ ಬೆಂಗಳೂರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.