Asianet Suvarna News Asianet Suvarna News

Belagavi Assembly Session : ಸಭಾಪತಿ ಮಾತು ಕೇಳದ 14 ಶಾಸಕರು ಸದನದಿಂದ ಹೊರಕ್ಕೆ

* ಬೆಳಗಾವಿ ಚಳಿಗಾಲದ ಅಧಿವೇಶನ
* ಹದಿನಾಲ್ಕು ಜನ ಪರಿಷತ್ ಸದಸ್ಯರ ಅಮಾನತು
* ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದರು
* ಸಭಾಪತಿ ಆದೇಶಕ್ಕೆ ಬೆಲೆ ಕೊಡದವರಿಗೆ ಅಮಾನತು ಶಿಕ್ಷೆ

ಬೆಳಗಾವಿ(ಡಿ. 15) ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ (Protest) ಮಾಡುತ್ತಿದ್ದ ಕಾಂಗ್ರೆಸ್ (Congress)ಸದಸ್ಯರನ್ನು ಒಂದು ದಿನದ ಮಟ್ಟಿಗೆ ವಿಧಾನ ಪರಿಷತ್ ನಿಂದ (Legislative council) ಅಮಾನತು ಮಾಡಲಾಗಿದೆ. ಸಭಾಪತಿ ಆದೇಶ ಉಲ್ಲಂಘಿಸಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದಾರೆ.

MLC Election Result ಸೋಲಿನ ಬೆನ್ನಲ್ಲೇ ರಮೇಶ್ ಜಾರಕಿಗೊಳಿಗೆ ಮತ್ತೊಂದು ಶಾಕ್, ಕ್ರಮಕ್ಕೆ ಮುಂದಾದ ಬಿಜೆಪಿ!

ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಅಮಾನತು ಮಾಡಲಾಗಿದೆ. ಸಭಾಪತಿ ಸ್ಥಾನದಲ್ಲಿ ಬಿಜೆಪಿಯ ಸದಸ್ಯೆ ತೇಜಸ್ವಿನಿ ಗೌಡ ಇದ್ದರು.   ಸಿಎಂ ಇಬ್ರಾಹಿಂ, ಪಿಆರ್ ರಮೇಶ್,  ಆರ್ ರಮೇಶ್, ನಾರಾಯಣ ಸ್ವಾಮಿ, ಬಿಕೆ ಹರಿಪ್ರಸಾದ್, ಯಬಿ ವೆಂಕಟೇಶ್, ವೀಣಾ ಅಚ್ಚಯ್ಯ ಸೇರಿ ಹದಿನಾಲ್ಕು ಜನ ಅಮಾನತಿಗೆ ಗುರಿಯಾಗಿದ್ದಾರೆ. 

 

Video Top Stories