ಕುಮಾರಸ್ವಾಮಿ ಅನುಕಂಪದ ಬ್ಯುಸಿನೆಸ್‌ ಮಾಡ್ತಿದ್ದಾರೆ: ಅಶ್ವತ್‌ ನಾರಾಯಣ್‌ ಕಿಡಿ

ಕುಮಾರಸ್ವಾಮಿ ರಾಜಕೀಯಕ್ಕೆ ಪ್ರಸ್ತುತ ಎಷ್ಟು ಸಲ್ಲುತ್ತಾರೆ? ಅಪ್ಪ ಆದ್ಮೇಲೆ ಮಗ ಅನುಕಂಪದ ಬ್ಯುಸಿನೆಸ್‌ ಮಾಡ್ತಿದ್ದಾರೆ ಎಂದು ಸಚಿವ ಅಶ್ವತ್‌ ನಾರಾಯಣ್‌ ವಾಗ್ದಾಳಿ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಕುಮಾರಸ್ವಾಮಿ ರಾಜಕೀಯಕ್ಕೆ ಬರೋದು ತಮ್ಮ ಉದ್ಧಾರಕ್ಕೋ ಅಥವಾ ಜನರ ಉದ್ಧಾರಕ್ಕೋ ಎಂದು ಸಚಿವ ಅಶ್ವತ್‌ ನಾರಾಯಣ್‌ ಕಿಡಿ ಕಾರಿದ್ದಾರೆ. ರಾಮನಗರ ಚನ್ನಪಟ್ಟಣ ಕ್ಷೇತ್ರ ನೋಡಿದ್ರೆ ಬೇಜಾರಾಗುತ್ತದೆ. ಅನುಕಂಪದ ಬ್ಯುಸಿನೆಸ್‌ ಮಾಡ್ತಿದ್ದಾರೆ. ಯಾವ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ. ಅವರು ಅಧಿಕಾರಕ್ಕೆ ಬರಲ್ಲ, ನಮಗೂ ಪೂರ್ತಿ ಬಹುಮತ ಬರಕೆ ಬಿಡಲ್ಲ. 2008ರಲ್ಲೂ ಬಿಜೆಪಿಗೆ ಬಹುಮತ ಬರಲಿಲ್ಲ. 2018ರಲ್ಲೂ ಪೂರ್ತಿ ಬಹುಮತ ಬಂದಿಲ್ಲ. ಪೂರ್ತಿ ಬಹುಮತ ಬರದ ಕಾರಣ ನಮ್ಮ ನಾಡಿಗೆ ಎಲ್ಲೋ ಒಂದಷ್ಟು ಹಿನ್ನೆಡೆಯಾಗಿದೆ. ಎಲ್ಲಾ ಭಾಗದಲ್ಲೂ ಬಿಜೆಪಿಯ ಕಮಲ ಅರಳಬೇಕು ಎಂದು ಹೇಳಿದರು.

Related Video