ಕೈ ಕೋಟೆಯೊಳಗೆ ಬಿರುಗಾಳಿ ಎಬ್ಬಿಸಿದ ಯಾದವೀ ಕಲಹ: ಅಧ್ಯಕ್ಷರ ಅಭಯ ಯಾರಿಗೆ ಸಿದ್ದುಗಾ, ಡಿಕೆಗಾ?

ರಾಜ್ಯ ಕಾಂಗ್ರೆಸ್'ನಲ್ಲಿ ನಡೀತಾ ಇರೋದು ದಾಯಾದಿ ಕಲಹ. ಇವ್ರನ್ನ ಕಂಡ್ರೆ ಅವ್ರಿಗಾಗಲ್ಲ, ಅವ್ರ ವರಸೆ ಇವ್ರಿಗೆ ಹಿಡಿಸಲ್ಲ.. ಎಲ್ಲವನ್ನೂ ಮೌನವಾಗಿ ನೋಡ್ತಾ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈ ಕಟ್ ಬಾಯ್ ಮುಚ್ ಅಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.19): "ಬಾಯಿ ಮುಚ್ಕೊಂಡು ಸುಮ್ಮನಿರಿ"..ಅಧ್ಯಕ್ಷರ ಆವಾಜ್..! ಖರ್ಗೆ ಖಡಕ್ ಆದೇಶ.. ನಿಲ್ಲುತ್ತಾ ಕಾಂಗ್ರೆಸ್ ಅಂತರ್ಯುದ್ಧ..? ಜಿದ್ದಿಗೆ ಬಿದ್ದವರು ಅಧ್ಯಕ್ಷರ ಮಾತು ಕೇಳ್ತಾರಾ..? ಸಿದ್ದು ಸಿಂಹಾಸನಕ್ಕೆ ಅಧ್ಯಕ್ಷರ ಅಭಯ..? ಏನಿದರ ಒಳಗುಟ್ಟು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕೈ ಕಟ್ ಬಾಯ್ ಮುಚ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಡಿದು ನಿಂತಿದೆ ಸಚಿವ ಪಡೆ, ಕೆರಳಿ ನಿಂತಿದ್ದಾರೆ ಕಾಂಗ್ರೆಸ್ ಕಟ್ಟಪ್ಪ.. ಕೈ ಪಾಳೆಯದಲ್ಲಿ ಯಾದವೀ ಕಲಹವನ್ನೂ ಮೀರಿಸುವಂಥಾ ಅಂತರ್ಯುದ್ಧ.. ಪಟ್ಟಕ್ಕಾಗಿ ಗುದ್ದಾಟ.. ಆಟ, ಆರ್ಭಟ.. ಅಖಾಡಕ್ಕಿಳಿದೇ ಬಿಟ್ಟರು ಖಡಕ್ ಖರ್ಗೆ..? ಅಧ್ಯಕ್ಷರ ಅಭಯ ಸಿಕ್ಕಿದ್ದು ಸಿದ್ದು ಸಿಂಹಾಸನಕ್ಕಾ, ಡಿಕೆ ಪಟ್ಟಕ್ಕಾ..? ಮಾತಿನ ಮಲ್ಲಯುದ್ಧಕ್ಕಿಳಿದವರರಿಗೆ ಖರ್ಗೆ ಕೊಟ್ಟದ್ದೆಂಥಾ ಎಚ್ಚರಿಕೆ..? 

ವಿಜಯೇಂದ್ರ v/s ಯತ್ನಾಳ್, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಿಂಗಳಾಂತ್ಯಕ್ಕೆ ಚುನಾವಣೆ!

ಬದಲಾವಣೆ, ಬದಲಾವಣೆ.. ಎಲ್ಲಿದೆ ಬದಲಾವಣೆ..? ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವ್ರು ಎತ್ತಿರೋ ಪ್ರಶ್ನೆ.. ಖಡಕ್ ಖರ್ಗೆಯವ್ರು ಬದಲಾವಣೆ ಇಲ್ವೇ ಇಲ್ಲ ಅಂದಿದ್ದು ಯಾವ ಕುರ್ಚಿಯ ಬಗ್ಗೆ..? ಸಿಎಂ ಕುರ್ಚಿನಾ, ಕೆಪಿಸಿಸಿ ಅಧ್ಯಕ್ಷ ಪಟ್ಟನಾ..?.

Suvarna Special: 7 ರಹಸ್ಯ,7 ಗುಟ್ಟು, ಜಿದ್ದಿನ ಜಲ್ಲಿಕಟ್ಟು, ಏನಿದು ಸೀಕ್ರೆಟ್ಟು?

ಕೈ ಕಟ್ ಬಾಯ್ ಮುಚ್. ಇದು ಕಾಂಗ್ರೆಸ್'ನ ಕಿರಿಕ್ ಪಾರ್ಟಿಗಳಿಗೆ ಖಡಕ್ ಖರ್ಗೆ ಕೊಟ್ಟಿರೋ ನೇರ ಎಚ್ಚರಿಕೆ.. ವಾರ್ನಿಂಗ್ ಕೊಟ್ಟಿರೋ ಖರ್ಗೆ ಖೇಲ್ ಶುರು ಮಾಡಿಯೇ ಬಿಟ್ರಾ..? ಬದಲಾವಣೆ, ಬದಲಾವಣೆ.. ಎಲ್ಲಿದೆ ಬದಲಾವಣೆ..? ಅಂತ ಖರ್ಗೆಯವ್ರು ಪ್ರಶ್ನಿಸಿದ್ದೇಕೆ..? ಬದಲಾವಣೆ ಪ್ರಶ್ನೆಯೇ ಇಲ್ವೇ ಇಲ್ಲ ಅಂದಿದ್ದು ಯಾವ ಕುರ್ಚಿಯ ಬಗ್ಗೆ..? ಸಿಎಂ ಕುರ್ಚಿನಾ, ಕೆಪಿಸಿಸಿ ಅಧ್ಯಕ್ಷ ಪಟ್ಟನಾ..? ಈ ಕುತೂಹಲದ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ ನೋಡಿ.
ಖರ್ಗೆ ಸಾಹೇಬ್ರ ಖಡಕ್ ಆದೇಶ.. ಸೈಲೆಂಟಾಗ್ತಾರಾ ಕಾಂಗ್ರೆಸ್'ನ ಕಿರಿಕ್ ಪಾರ್ಟಿಗಳು..? ಕಾಂಗ್ರೆಸ್ ಅಂತರ್ಯುದ್ಧಕ್ಕೆ ಬೀಳುತ್ತಾ ಬ್ರೇಕ್..? ಕ್ಯಾತೆ ತೆಗೆದವರು ಖರ್ಗೆ ಆದೇಶದ ಬಗ್ಗೆ ಹೇಳಿದ್ದೇನು..?.

ರಾಜ್ಯ ಕಾಂಗ್ರೆಸ್'ನಲ್ಲಿ ನಡೀತಾ ಇರೋದು ದಾಯಾದಿ ಕಲಹ. ಇವ್ರನ್ನ ಕಂಡ್ರೆ ಅವ್ರಿಗಾಗಲ್ಲ, ಅವ್ರ ವರಸೆ ಇವ್ರಿಗೆ ಹಿಡಿಸಲ್ಲ.. ಎಲ್ಲವನ್ನೂ ಮೌನವಾಗಿ ನೋಡ್ತಾ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈ ಕಟ್ ಬಾಯ್ ಮುಚ್ ಅಂದಿದ್ದಾರೆ. ಖರ್ಗೆ ಸಾಹೇಬ್ರ ಖಡಕ್ ಆದೇಶಕ್ಕೆ ಕಾಂಗ್ರೆಸ್'ನ ಕಿರಿಕ್ ಪಾರ್ಟಿಗಳು ಸೈಲೆಂಟಾಗ್ತಾರಾ..?

Related Video