
Karnataka Election 2023: ಪತ್ನಿ ಜೊತೆ ಬಂದು ಮತ ಹಾಕಿದ ನವರಸ ನಾಯಕ ಜಗ್ಗೇಶ್
ಕರ್ನಾಟಕ ಕುರುಕ್ಷೇತ್ರದಲ್ಲಿ ಇಂದು ನಿರ್ಣಾಯಕ ದಿನ
ಪತ್ನಿ ಜೊತೆ ಬಂದು ಮತಹಾಕಿದ ನವರಸ ನಾಯಕ ಜಗ್ಗೇಶ್
ಪ್ರಜಾಪ್ರಭುತ್ವದ ಹಬ್ಬಕ್ಕೆ ಬನ್ನಿ, ತಪ್ಪದೇ ವೋಟ್ ಮಾಡಿ
ಮತದಾನ ಮಾಡುವುದು ನಮ್ಮ ಹಕ್ಕು ಸಹ ಆಗಿದ್ದು, ಕರ್ತವ್ಯವೂ ಆಗಿದೆ. ಹಾಗಾಗಿ ನಾಯಕರು, ನಟ, ನಟಿಯರು, ಸ್ವಾಮೀಜಿಗಳು ಮತದಾನ ಮಾಡುತ್ತಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ರಾಜಕಾರಣಿಗಳಾದ ಬೈರತಿ ಸುರೇಶ್ ಹೆಬ್ಬಾಳದಲ್ಲಿ, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ. ಸುಧಾಕರ್ ಮತದಾನ ಮಾಡಿದ್ರು. ಇನ್ನೂ ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ , ನಟ ಗಣೇಶ್ ಸಹ ಮಾತದಾನ ಮಾಡಿದ್ದಾರೆ. ನಟ ಜಗ್ಗೇಶ್ ಪತ್ನಿ ಜೊತೆ ಬಂದು ಮತದಾನ ಮಾಡಿದ್ದು, ಈ ವೇಳೆ ಅವರು ಮಾಧ್ಯಮದವರ ಜೊತೆ ಮಾತನಾಡಿದ್ರು. ಬೆಂಗಳೂರಿನಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ, 389 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಕರ್ನಾಟಕ ಕುರುಕ್ಷೇತ್ರದಲ್ಲಿ ಇಂದು ನಿರ್ಣಾಯಕ ದಿನ: ಸುಧಾಮೂರ್ತಿ , ನಾರಾಯಣಮೂರ್ತಿ, ಬಿಎಸ್ವೈ ವೋಟಿಂಗ್