
Today Horoscope: ನವರಾತ್ರಿಯ ಮೂರನೇ ದಿನವಾಗಿದ್ದು, ಇಂದು ಮಹಾಕಾಳಿಯ ಆರಾಧನೆ ಹೀಗೆ ಮಾಡಿ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಮಂಗಳವಾರ, ತೃತೀಯ ತಿಥಿ, ವಿಶಾಖ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತೃತೀಯ ತಿಥಿ ಗೌರಿಯನ್ನು ಪ್ರತಿನಿಧಿಸುತ್ತದೆ. ಇಂದು ನವರಾತ್ರಿಯ ಮೂರನೇ ದಿನವಾಗಿದೆ. ಮೊದಲ ಮೂರು ದಿನ ಮಹಾಕಾಳಿಯ ಆರಾಧನೆ ಮಾಡಲಾಗುತ್ತದೆ. ಎರಡನೇ 3 ದಿನ ಮಹಾಲಕ್ಷ್ಮೀಯ ಪ್ರತಿನಿಧಿಸುವ ದಿನವಾಗಿದೆ. ಕೊನೆಯ ಮೂರು ದಿನದಲ್ಲಿ ಮಹಾಸರಸ್ವತಿಯ ಆರಾಧನೆ ಮಾಡಲಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಈ ದಿನ ವ್ಯಯ ಹೆಚ್ಚಿದೆ. ಜೊತೆಗೆ ಲಾಭವೂ ಇದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಸುಬ್ರಹ್ಮಣ್ಯ ಕವಚವನ್ನು ಪಠಿಸಿ.
ಇದನ್ನೂ ವೀಕ್ಷಿಸಿ: News Hour: ಗಾಜಾ ವಶಪಡಿಸಿಕೊಳ್ಳಲು ಸಜ್ಜಾಗಿ ನಿಂತ ಇಸ್ರೇಲ್, ನೇರ ಎಚ್ಚರಿಕೆ ನೀಡಿದ ಇರಾನ್!