
Today Horoscope: ಮಿಥುನ ರಾಶಿಯವರ ಮನಸ್ಸಿಗೆ ಇಂದು ವ್ಯಥೆ ಉಂಟಾಗಲಿದ್ದು, ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಏಕಾದಶಿ ತಿಥಿ, ಆಶ್ಲೇಷ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೃಷ್ಣ ಪಕ್ಷದ ಏಕಾದಶಿಯಲ್ಲಿ ಯಾರಾದ್ರೂ ತೀರಿಕೊಂಡರೇ, ಅವರ ಶ್ರಾದ್ಧವನ್ನು ಮಾಡಿ. ಜೊತೆಗೆ ಆಶ್ಲೇಷ ನಕ್ಷತ್ರ ಇರುವುದರಿಂದ ನಾಗ ದೇವರಿಗೆ ಗಂಧಾಲಂಕಾರ ಮಾಡಿ. ಇದನ್ನು ಚರ್ಮ ರೋಗ, ನರ ಸಂಬಂಧಿ ತೊಂದರೆ ಇರುವವರಿಗೆ ಹಚ್ಚಿ. ಅಲ್ಲದೇ ಈ ರೀತಿಯ ಪೂಜೆಯಿಂದ ನಿಮ್ಮ ಕುಟುಂಬಕ್ಕೆ ಒಳಿತಾಗಲಿದೆ. ಸಾಧ್ಯವಾದ್ರೆ ಎಳನೀರಿನ ಅಭಿಷೇಕ ಮಾಡಿಸಿ, ಆ ತೀರ್ಥವನ್ನು ಸೇವಿಸಿ.
ಇದನ್ನೂ ವೀಕ್ಷಿಸಿ: ಯಹೂದಿಗಳ ಹಬ್ಬದ ದಿನವೇ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಲು ಇದೆ ಕಾರಣ!