
Today Horoscope: ಮಿಥುನ ರಾಶಿಯವರ ಬುದ್ಧಿ ಇಂದು ಮಂಕಾಗಲಿದೆ...ಇದಕ್ಕೆ ಪರಿಹಾರವೇನು ಗೊತ್ತಾ..?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ನವಮಿ ತಿಥಿ, ವಿಶಾಖ ನಕ್ಷತ್ರ.
Add Asianetnews Kannada as a Preferred Source

ಅಧಿಕ ಶ್ರವಾಣ ಮಾಸದ ನವಮಿಯಲ್ಲಿ ಸ್ತ್ರೀಯರಿಗೆ ಮಂಗಳ ದ್ರವ್ಯಗಳ ದಾನ ಮಾಡಿ. ಅಧಿಕ ಮಾಸದಲ್ಲಿ ದಾನ ಮಾಡುವುದು ಹೆಚ್ಚು ಫಲ ತಂದು ಕೊಡುತ್ತದೆ ಎಂಬುದು ನಂಬಿಕೆಯಾಗಿದೆ. ಇಂದು ಚಂದ್ರ ಸಿಂಹ ರಾಶಿಯಲ್ಲಿದ್ದು, ಈ ರಾಶಿಯವರ ಬುದ್ಧಿ ಶಕ್ತಿ ಚೆನ್ನಾಗಿರುತ್ತದೆ. ತೀಕ್ಷ್ಣ ಸ್ವಭಾವದಾಗಿರುತ್ತಾರೆ. ಜೊತೆಗೆ ಪುರುಷರು ಸ್ತ್ರೀ ದ್ವೇಷಿಗಳಾಗಿರುತ್ತಾರೆ. ಹೆಣ್ಣು ಮಕ್ಕಳಾದ್ರೆ, ಅವರಿಗೆ ಬೇರೆ ಸ್ತ್ರೀಯರು ಗೈಡ್ ಮಾಡಿದ್ರೆ ಸಹಿಸುವುದಿಲ್ಲ. ಇನ್ನೂ ಸ್ವಲ್ಪ ಕಾಡು ಮೇಡು ತಿರುಗಾಡಲು ಇಷ್ಟಪಡುತ್ತಾರೆ.
ಇದನ್ನೂ ವೀಕ್ಷಿಸಿ: ಉಡುಪಿ ಫೈಲ್ಸ್, 'ಮಕ್ಕಳಾಟ' ಎಂದ ಕಾಂಗ್ರೆಸ್, ಗೃಹ ಸಚಿವರಿಗೆ ಇದು 'ಸಣ್ಣ ಘಟನೆ'!