
Today Rashibhavishy: ಇಂದು ತುಲಾ ರಾಶಿಯವರು ಹೆಚ್ಚು ವ್ಯಯ ಮಾಡಲಿದ್ದು, ವೃತ್ತಿಯಲ್ಲಿ ಮಿಶ್ರಫಲ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ದಶಮಿ ತಿಥಿ, ರೋಹಿಣಿ ನಕ್ಷತ್ರ.
Add Asianetnews Kannada as a Preferred Source

ಅಧಿಕ ಮಾಸದಲ್ಲಿ ಒಂದು ಶುಭವಾದ ದಿನ ಸಿಕ್ಕಾಗ ಈ ಸಂದರ್ಭದಲ್ಲಿ ಮಾಡಿದ ಪೂಜೆಗೆ ಹೆಚ್ಚು ಫಲ ಸಿಗಲಿದೆ. ಈ ದಿನ ಕುಜ ಕನ್ಯಾ ರಾಶಿಯಲ್ಲಿ ಇದ್ದಾಗ ಯಾವ ಫಲ ಸಿಗಲಿದೆ ಎಂಬುದನ್ನು ನೋಡುವುದಾದ್ರೆ, ಬುಧನ ಕ್ಷೇತ್ರದಲ್ಲಿ ಕುಜ ಇದ್ದಾಗ ಸಿಟ್ಟು, ಕೋಪ, ಅಸಹನೆ ಮತ್ತು ಅವರು ಧೈರ್ಯ ಶಾಲಿಯಾಗಿರುತ್ತಾರೆ. ಈ ದಿನ ಸಿಂಹ ರಾಶಿಯವರ ಆಹಾರದಲ್ಲಿ ವ್ಯತ್ಯಾಸವಾಗಲಿದೆ. ಕುಟುಂಬದಲ್ಲಿ ಘರ್ಷಣೆಯಾಗುವ ಸಾಧ್ಯತೆ ಇದೆ. ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.
ಇದನ್ನೂ ವೀಕ್ಷಿಸಿ: ಮಣಿಪುರ ಹಿಂಸೆ ಬಗ್ಗೆ ಮೌನ ಮುರಿದ ಮೋದಿ, ಅವಿಶ್ವಾಸ ನಿರ್ಣಯ ಮಂಡಿಸಿ ಮುಗ್ಗರಿಸಿದ ವಿಪಕ್ಷ!