Asianet Suvarna News Asianet Suvarna News

ಪಂಚಾಂಗ: ಶ್ರಾವಣ ಸೋಮವಾರ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿದರೆ ಆತ ಸಂಪ್ರೀತನಾಗುವನು

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಟಮಿ/ ನವಮಿ ತಿಥಿ, ಅನೂರಾಧ ನಕ್ಷತ್ರ, ಇಂದು ಸೋಮವಾರ. ಇಂದು ಶ್ರಾವಣ ಸೋಮವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಟಮಿ/ ನವಮಿ ತಿಥಿ, ಅನೂರಾಧ ನಕ್ಷತ್ರ, ಇಂದು ಸೋಮವಾರ. ಇಂದು ಶ್ರಾವಣ ಸೋಮವಾರ. ಇಂದು ಈಶ್ವರನ ಸನ್ನಿಧಾನಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸುವುದು, ಬಿಲ್ವಾರ್ಚನೆ ಮಾಡಿಸಿದರೆ ಆ ಶಂಕರ ಸಂಪ್ರೀತನಾಗುತ್ತಾನೆ. ಬಿಲ್ವಪತ್ರೆಯಲ್ಲಿ 3 ದಳಗಳಿರುತ್ತವೆ. ನಮ್ಮ ಪ್ರಾರಬ್ಧ ಕರ್ಮಗಳನ್ನು ದೂರ ಮಾಡು ಈಶ್ವರ ಎಂದು ಪ್ರಾರ್ಥಿಸಿದರೆ, ಆತ ನಿವಾರಿಸುತ್ತಾನೆ. 

ದಿನ ಭವಿಷ್ಯ: ಕುಂಭ ರಾಶಿಯವರಿಗೆ ಧರ್ಮಕಾರ್ಯಗಳಿಗೆ ಅಡ್ಡಿ ಇರಲಿದೆ!

Video Top Stories