Today Horoscope: ಶುಭ ಕಾರ್ಯಗಳಿಗೆ ಈ ದಿನ ಉತ್ತಮವಲ್ಲ..ಇಂದು ಸೂರ್ಯ ದೇವನ ಪ್ರಾರ್ಥನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಗುರುವಾರ, ಪಂಚಮಿ ತಿಥಿ, ಭರಣಿ ನಕ್ಷತ್ರ.

ಭರಣಿ ನಕ್ಷತ್ರ ಇರುವುದರಿಂದ ಇಂದು ಶುಭ ಕಾರ್ಯಗಳಿಗೆ ಉತ್ತಮವಾದ ದಿನವಲ್ಲ. ಸೂರ್ಯ ಈ ದಿನ ಕುಂಭ ರಾಶಿಯಿಂದ ಮೀನಾ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಎಲ್ಲಾ ಕಡೆ ಶುಭವನ್ನು ಉಂಟು ಮಾಡುತ್ತಾನೆ. ಹಾಗಾಗಿ ಇಂದು ಸೂರ್ಯ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಬಂಧು-ಮಿತ್ರರ ಸಹಕಾರ. ಆರೋಗ್ಯದಲ್ಲಿ ವ್ಯತ್ಯಾಸ. ಆದಿತ್ಯ ಹೃದಯ ಪಠಿಸಿ.

ಇದನ್ನೂ ವೀಕ್ಷಿಸಿ: ರಾಹುಕಾಲ ಬಂದು ಬಿಡುತ್ತೆ ಅಂತ, ತಮ್ಮ ಬರುವ ಮುನ್ನವೇ ದೀಪ ಬೆಳಗಿಸಿದ ಶಾಸಕ ಹೆಚ್.ಡಿ. ರೇವಣ್ಣ

Related Video