
Today Horoscope: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಗುರುವಾರ, ಷಷ್ಠಿ ತಿಥಿ, ಚಿತ್ತಾ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗುರುವಾರ ಷಷ್ಠಿ ತಿಥಿ ಬಂದಿರುವುದರಿಂದ ಸುಬ್ರಹ್ಮಣ್ಯ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿ. ಸ್ವಾಮಿಗೆ ಪ್ರಿಯವಾದ ಆರು ಬಾಳೆ ಹಣ್ಣನ್ನು ಆತನಿಗೆ ನೈವೇದ್ಯ ಮಾಡಿಸಿ, ಇದರಿಂದ ಒಳಿತಾಗಲಿದೆ. ಈ ದಿನ ಸಿಂಹ ರಾಶಿಯವರಿಗೆ ಅನ್ನ ಸಮೃದ್ಧಿ. ಮಾತಿನ ಸೌಖ್ಯತೆ. ಆರೋಗ್ಯ ಸಮಸ್ಯೆ ಕಾಡಬಹುದು. ಹಣವ್ಯಯವಾಗುವ ಸಾಧ್ಯತೆ ಇದೆ. ವಿಷ್ಣು-ಲಲಿತಾ ಸಹಸ್ರನಾಮ ಪಠಿಸಿ. ಕನ್ಯಾ ರಾಶಿಯವರಿಗೆ ಇಂದು ಆರೋಗ್ಯ ವ್ಯತ್ಯಾಸವಾಗಲಿದೆ. ಗುಹ್ಯ ಸ್ಥಾನಗಳಲ್ಲಿ ತೊಂದರೆ. ಬುದ್ಧಿಬಲ ಚುರುಕಾಗಲಿದೆ. ದುರ್ಗಾ ಕವಚ ಪಠಿಸಿ.
ಇದನ್ನೂ ವೀಕ್ಷಿಸಿ: ಹಾರ್ಟ್ಅಟ್ಯಾಕ್ ಬಗ್ಗೆ ಮೊದ್ಲೇ ತಿಳಿಯೋಕೆ ECG ಮಾಡಿ