Asianet Suvarna News Asianet Suvarna News

Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ? ಅರಿವಿಗಾಗಿ ಪರಮೇಶ್ವರನ ಆರಾಧನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ,ಶರದ್‌ ಋತು,ಕಾರ್ತಿಕ ಮಾಸ,ಕೃಷ್ಣ ಪಕ್ಷ,ಸೋಮವಾರ,ಸಪ್ತಮಿ ತಿಥಿ,ಮಖಾ ನಕ್ಷತ್ರ.

ಇಂದು ಎರಡನೇ ಕಾರ್ತೀಕ ಸೋಮವಾರವಾಗಿದ್ದು, ಅರಿವಿಗಾಗಿ ಇಂದು ಪರಮೇಶ್ವರನ ಆರಾಧನೆ ಮಾಡಿ. ಈಶ್ವರ ಅರಿವಿನ ಮಹಾ ಒಡೆಯನಾಗಿದ್ದಾನೆ. ಸಿಂಹ ರಾಶಿಯವರಿಗೆ ಇಂದು ಅಧಿಕ ವ್ಯಯ. ಸ್ತ್ರೀಯರಿಗೆ ಕಣ್ಣಿನ ಬಾಧೆ. ಆರೋಗ್ಯ ತೊಂದರೆ. ಕೆಲಸದಲ್ಲಿ ಅನುಕೂಲ. ಬಂಧು-ಮಿತ್ರರ ಸಹಾಯ ದೊರೆಯಲಿದೆ. ಆದಿತ್ಯ ಹೃದಯ ಪಠಿಸಿ. ಕನ್ಯಾ ರಾಶಿಯವರಿಗೆ ದೂರ ಪ್ರಯಾಣದಲ್ಲಿ ತೊಂದರೆ. ನೀರಿನ ಪ್ರಯಾಣದಲ್ಲಿ ತೊಡಕು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ವೃತ್ತಿಯಲ್ಲಿ ಅನುಕೂಲ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನೀವು ಏನ್ ಹೇಳ್ತೀರಾ? ಆರ್‌. ಅಶೋಕ್‌ ಅಡ್ಜಸ್ಟ್ಮೆಂಟ್ ರಾಜಕಾರಣಿನಾ ?

Video Top Stories