Asianet Suvarna News Asianet Suvarna News

KPCC ಅಧ್ಯಕ್ಷ ಹುದ್ದೆ: ಕೊನೆಗೂ ನಿಲುವು ಪ್ರಕಟಿಸಿದ ಡಿಕೆಶಿ

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮುಂದಿನ ಕೆಪಿಸಿಸಿ ಸಾರಥಿಯಾಗುತ್ತಾರಾ। ಎಂಬ ಬಗ್ಗೆ ತೆರೆಮರೆಯಲ್ಲಿ ಚರ್ಚೆ ಸಾಗಿದೆ. 

ನವದೆಹಲಿ (ಜೂ. 19) : ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮುಂದಿನ ಕೆಪಿಸಿಸಿ ಸಾರಥಿಯಾಗುತ್ತಾರಾ। ಎಂಬ ಬಗ್ಗೆ ತೆರೆಮರೆಯಲ್ಲಿ ಚರ್ಚೆ ಸಾಗಿದೆ. 

ಹೈಕಮಾಂಡ್ ಈ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಿಲ್ಲ, ಅಥವಾ ಯಾವುದೇ ಆಫರ್ ಕೂಡಾ ಬಂದಿಲ್ಲ. ಪಕ್ಷದಲ್ಲಿ ಯಾವ ಪೋಸ್ಟ್ ಖಾಲಿಯೂ ಇಲ್ಲ, ನಾನೂ ಯಾವ ಹುದ್ದೆಯನ್ನು ಹುಡುಕಿಕೊಂಡು ಹೋಗಲ್ಲ, ಎಂದು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು, ಇಲ್ಲದಿದ್ದರೆ ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸುವುದು ಸಾಧ್ಯವಿಲ್ಲ. ಈ ಮಾತನ್ನು ರಾಹುಲ್ ಗಾಂಧಿಯವರಿಗೆ ತಿಳಿಸಿರುವುದಾಗಿ ಡಿಕೆಶಿ ಹೇಳಿದರು.