ಎಚ್ಡಿಕೆ, ಸಿದ್ದು ಆಯ್ತು, ಈಗ ಬಿಎಸ್ವೈ ಕಡೆ ಈಶ್ವರಪ್ಪ ಗುರಿ!
ಯಾವಾಗಲೂ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತಿನ ಸಮರ ಸಾರುವ ಬಿಜೆಪಿ ನಾಯಕ, ಸಚಿವ ಕೆ.ಎಸ್. ಈಶ್ವರಪ್ಪ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ನೀಡಿದರು.
ಬೆಂಗಳೂರು (ಸೆ.28): ಯಾವಾಗಲೂ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತಿನ ಸಮರ ಸಾರುವ ಬಿಜೆಪಿ ನಾಯಕ, ಸಚಿವ ಕೆ.ಎಸ್. ಈಶ್ವರಪ್ಪ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ನೀಡಿದರು.
ಮೊದಲೇ ಡಿಸಿಎಂ, ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ನೇಮಕ ವಿಚಾರವಾಗಿ ಹಿರಿಯ ನಾಯಕರಲ್ಲಿ ಒಳಗೊಳಗೆ ಅತೃಪ್ತಿ ಇದೆ. ಕಳೆದ ಶುಕ್ರವಾರ ಬಿ.ಎಸ್. ಯಡಿಯೂರಪ್ಪ ತನ್ನ ಸಚಿವರಿಗೆ ಹೆಚ್ಚುವರಿ ಖಾತೆ ಹಂಚಿಕೆ ಮಾಡಿದ್ದು, ಕೆಲವರಲ್ಲಿ ಮತ್ತೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ.
ಈಶ್ವರಪ್ಪ ಏನ್ ಹೇಳ್ತಿದ್ದಾರೆ ನೋಡೋಣ ಬನ್ನಿ...