Asianet Suvarna News Asianet Suvarna News

ಜಿಂದಾಲ್ ಮಾತ್ರ ಅಲ್ಲ! ರಾಜೀನಾಮೆಗೆ ಇನ್ನಷ್ಟು ಕಾರಣ ಬಿಚ್ಚಿಟ್ಟ ಆನಂದ್ ಸಿಂಗ್

ರಾಜೀನಾಮೆಗೆ ಜಿಂದಾಲ್‌ಗೆ ಭೂಮಿ ಮಾತ್ರ ಕಾರಣವಲ್ಲ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆನಂದ್ ಸಿಂಗ್, ರಾಜೀನಾಮೆ ನೀಡುವ ಹಿಂದಿರುವ ಇನ್ನಷ್ಟು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. 

ಬಳ್ಳಾರಿ (ಜು.02): ಶಾಸಕ ಸ್ಥಾನಕ್ಕೆ ವಿಜಯನಗರ MLA ಆನಂದ್ ಸಿಂಗ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆಯಲ್ಲದೇ, ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಈ ನಡೆಯ ಹಿಂದೆ ಪ್ರಮುಖವಾಗಿ ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಪಕ್ಷ ಮತ್ತು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಕಾರಣ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆನಂದ್ ಸಿಂಗ್ ಇನ್ನಷ್ಟು ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

Video Top Stories