ಖರ್ಗೆ ಭೇಟಿ ಹಿಂದಿದೆ ಕುಮಾರಸ್ವಾಮಿಯ ಮಾಸ್ಟರ್ ಪ್ಲಾನ್..!
ಜೆಡಿಎಸ್ ಜತೆ ಮೈತ್ರಿ ಸಾಕು ಎಂದು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂಬ ಅನುಮಾನಗಳು ಸಿಎಂಗೆ ಕಾಡ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಜೆಡಿಎಸ್ ಮೈತ್ರಿಯೇ ಕಾರಣ ಎಂಬುದು ಸಿದ್ದರಾಮಯ್ಯ ವಾದ. ಅದನ್ನ ರಾಹುಲ್ ಗಾಂಧಿಗೆ ಮನದಟ್ಟು ಮಾಡಿಕೊಟ್ಟು ಒಂದು ವರ್ಷದ ನಂತರ ಚುನಾವಣೆಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದಾರಂತೆ. ಆದ್ದರಿಂದ ಖರ್ಗೆ ಭೇಟಿ ಮಾಡಿರೋ ಸಿಎಂ ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸಿದ್ದಾರೆ.
ಬೆಂಗಳೂರು, [ಜೂ.19]: ಮೈತ್ರಿ ಸರ್ಕಾರ ಸೇಫ್ ಅಲ್ಲ ಅನ್ನೋ ಮನೋಭಾವ ಜೆಡಿಎಸ್ ನಾಯಕರಲ್ಲಿ ಮೂಡಿದಂತಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಹುಲ್ ಗಾಂಧಿ ಭೇಟಿಯಾಗಿ, ಕಾಂಗ್ರೆಸ್ ನ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಮಧ್ಯೆ, ಮಲ್ಲಿಕಾರ್ಜುನ್ ಖರ್ಗೆಯವರನ್ನ ಭೇಟಿಯಾದ ಸಿಎಂ ಕುಮಾರಸ್ವಾಮಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಜೆಡಿಎಸ್ ಜತೆ ಮೈತ್ರಿ ಸಾಕು ಎಂದು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂಬ ಅನುಮಾನಗಳು ಸಿಎಂಗೆ ಕಾಡ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಜೆಡಿಎಸ್ ಮೈತ್ರಿಯೇ ಕಾರಣ ಎಂಬುದು ಸಿದ್ದರಾಮಯ್ಯ ವಾದ. ಅದನ್ನ ರಾಹುಲ್ ಗಾಂಧಿಗೆ ಮನದಟ್ಟು ಮಾಡಿಕೊಟ್ಟು ಒಂದು ವರ್ಷದ ನಂತರ ಚುನಾವಣೆಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದಾರಂತೆ. ಆದ್ದರಿಂದ ಖರ್ಗೆ ಭೇಟಿ ಮಾಡಿರೋ ಸಿಎಂ ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸಿದ್ದಾರೆ.