Asianet Suvarna News Asianet Suvarna News

ಕೊನೆಗೂ ಮುಂದಿನ ನಡೆ ಪ್ರಕಟಿಸಿದ ಬಿಜೆಪಿ; ನಾಳೆ ಕ್ಲೈಮ್ಯಾಕ್ಸ್?

ಮೈತ್ರಿ ಬಿಟ್ಟು ಬಿಜೆಪಿಗೆ ಬೆಂಬಲ ಸೂಚಿಸಿದ ಇಬ್ಬರು ಪಕ್ಷೇತರ ಶಾಸಕರು; ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಹೊಸ ತಿರುವು; ಬೆಳವಣಿಗೆಗಳ ಹಿಂದೆ ನಮ್ಮ ಕೈವಾಡ ಇಲ್ಲ: ಬಿಜೆಪಿ

ಬೆಂಗಳೂರು (ಜು.08): ರಾಜ್ಯದ ಇಬ್ಬರು ಪಕ್ಷೇತರ ಶಾಸಕರು ಮೈತ್ರಿಕೂಟಕ್ಕೆ ನೀಡಿದ್ದ  ಬೆಂಬಲವನ್ನು ವಾಪಾಸು ಪಡೆದು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷೇತರರ ಈ ನಡೆ ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಗಳನ್ನು ಹುಟ್ಟುಹಾಕಿದೆ.

ಆ ಮೂಲಕ ಪ್ರತಿಪಕ್ಷ ಬಿಜೆಪಿಯು ಸದನದಲ್ಲಿ ತನ್ನ ಬಲವನ್ನು ಎರಡು ಸೀಟುಗಳಿಂದ ಹೆಚ್ಚಿಸಿಕೊಂಡಿದೆ. ಇನ್ನೊಂದು ಕಡೆ ರಾಜೀನಾಮೆ ನೀಡುತ್ತಿರುವ ಮೈತ್ರಿ ಶಾಸಕರ ಪಟ್ಟಿ ಬೆಳೆಯುತ್ತಿದ್ದು, ರಾಜ್ಯ ರಾಜಕಾರಣವು ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ,

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕರು  ತಮ್ಮ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ತಮ್ಮ ಮುಂದಿನ ನಡೆಯನ್ನು ಪ್ರಕಟಿಸಿದ್ದಾರೆ. ಈ ಸುದ್ದಿ ನೋಡಿ....