
ಭಾರತಕ್ಕೆ ಉಗ್ರರ ಎಂಟ್ರಿ..! ದಕ್ಷಿಣ ಭಾರತವೇ ಟಾರ್ಗೆಟ್..?
ಮುಂಬೈ ಮಾದರಿಯ ದಾಳಿಗೆ ಉಗ್ರರು ಸಂಚು ರೂಪಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. 'ಸಮುಂದರಿ' ಜಿಹಾದ್ ಎಂಬ ತಂತ್ರವನ್ನು ಪ್ರಯೋಗಿಸಲು ಉಗ್ರರು ಸಿದ್ಧತೆ ನಡೆಸಿದ್ದು, ಸಮುದ್ರ ಮಾರ್ಗವಾಗಿ ದೇಶದೊಳಗೆ ನುಸುಳುತ್ತಿದ್ದಾರೆ. ಈ ಬಗ್ಗೆ ಭಾರತಕ್ಕೆ ಸಕ್ಷ್ಯಾಧಾರಗಳೂ ಲಭ್ಯವಾಗಿದೆ.
ಮುಂಬೈ ಮಾದರಿಯ ದಾಳಿಗೆ ಉಗ್ರರು ಸಂಚು ರೂಪಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. 'ಸಮುಂದರಿ' ಜಿಹಾದ್ ಎಂಬ ತಂತ್ರವನ್ನು ಪ್ರಯೋಗಿಸಲು ಉಗ್ರರು ಸಿದ್ಧತೆ ನಡೆಸಿದ್ದು, ಸಮುದ್ರ ಮಾರ್ಗವಾಗಿ ದೇಶದೊಳಗೆ ನುಸುಳುತ್ತಿದ್ದಾರೆ. ಈ ಬಗ್ಗೆ ಭಾರತಕ್ಕೆ ಸಕ್ಷ್ಯಾಧಾರಗಳೂ ಲಭ್ಯವಾಗಿದೆ. ಉಗ್ರರು ದಕ್ಷಿಣ ಭಾರತವನ್ನೇ ಟಾರ್ಗೆಟ್ ಮಾಡಿದ್ದು ಈ ಬಗ್ಗೆ ಸೇನೆ ಎಚ್ಚರಿಕೆ ನೀಡಿದೆ. ಗುಜರಾತ್ನ ಸರ್ಕ್ರೀಕ್ ಕೊಲ್ಲಿಯಲ್ಲಿ ಬೋಟ್ಗಳೂ ಪತ್ತೆಯಾಗಿವೆ. ಬೋಟ್ಗಳನ್ನು ಸೇನೆ ವಶಕ್ಕೆ ಪಡೆದಿದೆ. ಉಗ್ರರ ನುಸುಳುವಿಕೆ ಹಿನ್ನೆಲೆಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹಾಗೆಯೇ ತಿರುಪತಿ, ಆಂದ್ರದ ಶ್ರೀಹರಿಕೋಟಾದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ.
Add Asianetnews Kannada as a Preferred Source
