
ಶಕ್ತಿ ಯೋಜನೆ ಎಫೆಕ್ಟ್ ಹೈರಾಣಾದ ವಿದ್ಯಾರ್ಥಿಗಳು.....
ಶಕ್ತಿ ಯೋಜನೆ ಈಗಾಗಲೇ ಸುದ್ದಿಯಾಗಿದ್ದು ಬಸ್ಸುಗಳಲ್ಲಿ ನಿಲ್ಲಲು ಜಾಗವಿಲ್ಲದಂತಾಗಿದೆ. ವಿಜಯಪುರ ಪ್ರಯಾಣಿಕರು ಬಸ್ಸುಗಳ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ.
ಕಾಂಗ್ರೆಸ್ ಸರಕಾರ ನೀಡಿರುವ ಹಲವು ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಈಗಾಗಲೇ ಸುದ್ದಿಯಾಗಿದ್ದು ಬಸ್ಸುಗಳಲ್ಲಿ ನಿಲ್ಲಲು ಜಾಗವಿಲ್ಲದಂತಾಗಿದೆ. ವಿಜಯಪುರ ಪ್ರಯಾಣಿಕರು ಬಸ್ಸುಗಳ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜಾಗ ಸಿಗದೆ ಬಸ್ಸಿನ ಬಾಗಲಿಗೆ ಜೋತು ಬಿದ್ದು ತೆರಳುತ್ತಿರುವ ದೃಶ್ಯ ಕಂಡುಬಂದಿದೆ. ಶಕ್ತಿ ಯೋಜನೆ ಏಫೆಕ್ಟ್ನಿಂದ ಮಹಿಳೆಯರಿಗೆ ಉಚಿತ ಪ್ರಯಾಣ ದೊರೆತಿದ್ದು, ಬಹುತೇಕ ಮಹಿಳೆಯರಿಂದ ಬಸ್ ಫುಲ್ ಆಗಿದೆ. ಹೀಗಾಗಿ ದಿನನಿತ್ಯ ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ಇದು ಸಂಕಟದಂತೆ ಎದುರಾಗಿದೆ.
Add Asianetnews Kannada as a Preferred Source
