
ರೌಡಿಶೀಟರ್ಗೆ ಸಿಕ್ತು ಆನೇಕಲ್ ಪುರಸಭೆ ಸದಸ್ಯ ಪಟ್ಟ...
ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನು ಆನೇಕಲ್ ಪುರಸಭೆಗೆ ಬಿಜೆಪಿ ಪಕ್ಷ ನಾಮನಿರ್ದೇಶನ ಮಾಡಿದೆ.
ಬಿಜೆಪಿಗೆ ರೌಡಿಶೀಟರ್'ಗಳ ನಂಟು ಮುಂದುವರೆದಿದ್ದು, ಬಿಜೆಪಿ ಸೇರ್ಪಡೆ ಮುಂಚೆಯೇ ರೌಡಿಶೀಟರ್ಗೆ ಅಧಿಕಾರ ನೀಡಲಾಗಿದೆ. ಆನೇಕಲ್ ಪುರಸಭೆ ನಾಮನಿರ್ದೇಶಿತ ಸದಸ್ಯನಾಗಿ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನು ಆಯ್ಕೆ ಮಾಡಲಾಗಿದೆ. ಮೂರು ದಿನದ ಹಿಂದೆ ಪುರಸಭೆಗೆ ರೌಡಿಶೀಟರ್ ಉಪ್ಪಿಯನ್ನು ಆಯ್ಕೆ ಮಾಡಿದ್ದು, ನಖರಾಬಾಬು ಕೊಲೆ ಕೇಸ್'ನಲ್ಲಿ ಮುಂಜುನಾಥ್ ಆರೋಪಿಯಾಗಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ