ಅನ್ಯ ಧರ್ಮೀಯರಿಗೆ ವ್ಯಾಪಾರ: ಬಿಜೆಪಿ ಶಾಸಕನ ವಿರುದ್ಧ ಭಜರಂಗದಳ ಕಿಡಿ
ರಾಜ್ಯದಲ್ಲಿ ಧರ್ಮ ದಂಗಲ್ ಮತ್ತಷ್ಟು ತಾರಕಕ್ಕೆ ಏರಿದ್ದು, ಬೆಂಗಳೂರಿನಲ್ಲಿ ಧರ್ಮ ಸಂಘರ್ಷ ಹೆಚ್ಚಾಗಿದೆ. ಶಾಸಕ ಉದಯ್ ಗರುಡಾಚಾರ್ ವಿರುದ್ಧವೇ ಭಜರಂಗದಳ ಕಿಡಿ ಕಾರಿದೆ.
ಬೆಂಗಳೂರಿನ ವಿವಿಪುರಂನಲ್ಲಿ ನಾಳೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳ್ಳಿ ತೇರಿನ ಸಂಭ್ರಮವಿದ್ದು, ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದರು ಎಂದು ಹಿಂದೂ ಸಂಘಟನೆಗಳು ಮನವಿ ಸಲ್ಲಿಸಿದ್ದರು. ಆದರೆ ಎಲ್ಲರಿಗೂ ಅವಕಾಶ ನೀಡಿ ಎಂದು ಶಾಸಕ ಉದಯ್ ಗುರುಡಾಚಾರ್ ಹೇಳಿದ್ದರು. ಸೆಕ್ಯುಲಸರಿಂ ಅನ್ನುವುದು ದೇವಸ್ಥಾನಕ್ಕೆ ಮಾತ್ರ ಯಾಕೆ? ವಿವಿ ಪುರಂನಲ್ಲಿ ನಡೆಯುವ ತೇರಿಗೆ ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎಂದು 3 ದಿನಗಳಿಂದ ಹಿಂದೂ ಸಂಘನೆಗಳು ಪ್ರಚಾರ ಮಾಡುತ್ತಿದ್ದು, ಅದರ ಜೊತೆಗೆ ಶಾಸಕರಿಗೂ ಮನವಿ ಸಲ್ಲಿಸಿದ್ದರು. ಆದರೆ ಇದರ ಬಗ್ಗೆ ಮಾತನಾಡಿದ ಕ್ಷೇತ್ರದ ಶಾಸಕ ಉದಯ್ ಗುರುಡಾಚಾರ್, ನಾವೆಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಹೇಳಿಯನ್ನು ಕೊಟ್ಟಿದ್ದು, ಇದರ ವಿರುದ್ಧ ಭಜರಂಗದಳ ತಿರುಗಿ ಬಿದ್ದಿದೆ.
Mandya: ಮಂಡ್ಯದಲ್ಲಿ ಇನ್ನೊಬ್ಬರ ರಕ್ತ ಹೀರುವ ನಾಯಕರು ಬೇಕಾ? ಅಶ್ವತ್ಥ ನಾರಾಯಣ ಟೀಕೆ