ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವಕ್ಕೆ ಚಾಲನೆ

ಯತಿ ಶ್ರೇಷ್ಠ ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವದ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶನಿವಾರ ವಿಧ್ಯು​ಕ್ತ​ವಾಗಿ ಚಾಲನೆ ನೀಡಿದರು.ಶ್ರೀ ಗುರುರಾಯರ ಆರಾಧನಾನ ಮಹೋತ್ಸವ ನಿಮಿತ್ತ ಮಂತ್ರಾಲಯದದಲ್ಲಿ ಹಮ್ಮಿಕೊಂಡಿರುವ ಸಪ್ತರಾತ್ರೋತ್ಸವದ ಮೊದಲ ದಿನ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧಾನ್ಯೋತ್ಸವ ಪ್ರವಚನ, ದಾಸವಾಣಿ ಇತರೆ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶನಿವಾರ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ವಿದ್ವಾಂಸರಿಂದ ಪ್ರವಚನ, ಶ್ರೀಉತ್ಸವ ರಾಯರ ಪಾದಪೂಜೆ, ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರವನ್ನು ಮಾಡಲಾಯಿತು. ನಂತರ ಪೀಠಾಧಿಪತಿ ಡಾ.ಸುಬುದೇಂದ್ರ ತೀರ್ಥರು ಶ್ರೀಮೂಲ ರಾಘುಪತಿ ವೇದವಾಸ್ಯದೇವರ ಪೂಜೆ, ಅಲಂಕಾರ ಸಂತರ್ಪಣೆ, ಅಷ್ಟೋದಕ, ಮಹಾಮಂಗಳಾರತಿ ನೆರವೇರಿಸಿದರು.

Share this Video
  • FB
  • Linkdin
  • Whatsapp

ರಾಯ​ಚೂ​ರು (ಆ.22): ಯತಿ ಶ್ರೇಷ್ಠ ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವದ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶನಿವಾರ ವಿಧ್ಯು​ಕ್ತ​ವಾಗಿ ಚಾಲನೆ ನೀಡಿದರು.

Add Asianetnews Kannada as a Preferred SourcegooglePreferred

ಶ್ರೀ ಗುರುರಾಯರ ಆರಾಧನಾನ ಮಹೋತ್ಸವ ನಿಮಿತ್ತ ಮಂತ್ರಾಲಯದದಲ್ಲಿ ಹಮ್ಮಿಕೊಂಡಿರುವ ಸಪ್ತರಾತ್ರೋತ್ಸವದ ಮೊದಲ ದಿನ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧಾನ್ಯೋತ್ಸವ ಪ್ರವಚನ, ದಾಸವಾಣಿ ಇತರೆ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರಟಗಿ - ಬೆಂಗಳೂರು ರೈಲು ಶೀಘ್ರ ಪ್ರಾರಂಭ : ದೇಶದಲ್ಲಿ 100 ಹೊಸ ರೈಲು ಸಂಚಾರ

ಶನಿವಾರ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ವಿದ್ವಾಂಸರಿಂದ ಪ್ರವಚನ, ಶ್ರೀಉತ್ಸವ ರಾಯರ ಪಾದಪೂಜೆ, ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರವನ್ನು ಮಾಡಲಾಯಿತು. ನಂತರ ಪೀಠಾಧಿಪತಿ ಡಾ.ಸುಬುದೇಂದ್ರ ತೀರ್ಥರು ಶ್ರೀಮೂಲ ರಾಘುಪತಿ ವೇದವಾಸ್ಯದೇವರ ಪೂಜೆ, ಅಲಂಕಾರ ಸಂತರ್ಪಣೆ, ಅಷ್ಟೋದಕ, ಮಹಾಮಂಗಳಾರತಿ ನೆರವೇರಿಸಿದರು.

Related Video