Asianet Suvarna News Asianet Suvarna News

ದರ್ಶನ್ ಬಚಾವ್‌ಗೆ ಯತ್ನಿಸಿದವರಿಗೆ ತನಿಖೆಯ ಬಿಸಿ! ನಟನ ಜತೆ ಮಾತಾಡಿದವರ ಮನೆಗೆ ಪೊಲೀಸ್ ನೋಟಿಸ್!

ಪೊಲೀಸರು ಪಡೆದುಕೊಂಡಿದ್ದಾರೆ ದರ್ಶನ್ ಸಂಪರ್ಕಿಸಿದವರ ಪಟ್ಟಿ 
ಬಹುತೇಕ ವಾಟ್ಸಪ್ ಕಾಲ್ ಮೂಲಕವೇ ಮಾತಾನಾಡಿರುವ ದರ್ಶನ್
ಸೋಮವಾರದ ಬಳಿಕ ನೋಟಿಸ್ ನೀಡಲು ಪೊಲೀಸರ ನಿರ್ಧಾರ...!

ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ‌ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ದರ್ಶನ್(Darshan) ಬಚಾವ್‌ಗೆ ಯತ್ನಿಸಿದವರು ತನಿಖೆ ಎದುರಿಸಬಹುದಾದ ಸಾಧ್ಯತೆ ಇದೆ. ದರ್ಶನ್ ಜತೆ ಮಾತಾಡಿದವರ ಮನೆಗೆ ಪೊಲೀಸ್ ನೋಟಿಸ್(Police Notice) ಬರಲಿದೆಯಂತೆ. ರೇಣುಕಾಸ್ವಾಮಿ ಕೊಲೆ‌ ನಂತರ ಹಲವರನ್ನು ನಟ ದರ್ಶನ್‌ ಸಂಪರ್ಕ ಮಾಡಿದ್ದರಂತೆ. ಯಾವ ಕಾರಣಕ್ಕೆ ಸಂಪರ್ಕ ಎಂದು ಈವರೆಗೂ ದರ್ಶನ್ ಬಾಯಿ ಬಿಟ್ಟಿಲ್ಲ. ನೋಟಿಸ್ ನೀಡಿ ತನಿಖೆ ನಡೆಸಿಯೇ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ. ಯಾವ ಕಾರಣಕ್ಕೆ ಸಂಪರ್ಕ ಮಾಡಿದ್ದರು ಎಂದು ದರ್ಶನ್ ಹೇಳಬೇಕಿದ್ದು, ಇವರಲ್ಲಿ ದರ್ಶನ್ ಬಚಾವ್ ಮಾಡಲು ಯತ್ನಿಸಿದ್ದವರಿಗೆ ಸಂಕಷ್ಟ ಫಿಕ್ಸ್ ಆಗಿದೆ. ಯಾರೇ ಪ್ರಭಾವಿಗಳು ಇದ್ರೂ ಅವರನ್ನ ಬಿಡಲ್ಲ ಎಂದು ಪೊಲೀಸರು ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರಕ್ಕೆ ನಟ ದರ್ಶನ್? 139ಕ್ಕೂ ಹೆಚ್ಚು ಸಾಕ್ಷ್ಯ ಕಲೆಹಾಕಿದ ತನಿಖಾಧಿಕಾರಿಗಳು!

Video Top Stories