Asianet Suvarna News Asianet Suvarna News

ಮಾನವೀಯತೆ ಸತ್ತು ಹೋಗಿದ್ಯಾ? ಯುವಕನ ಕೈಕಾಲು ಕಟ್ಟಿ ರಸ್ತೆಗೆ ಬಿಸಾಕಿದ ಜನ

ಸಂಪೂರ್ಣ ಬೆತ್ತಲಾಗಿ ರಸ್ತೆಯ ಮೇಲೆ ಉರುಳಾಡುತ್ತಿರುವ ಯುವಕ.. ಯುವಕನ ಕೈಕಾಲು ಕಟ್ಟಿ ಹಾಕಿ ರಸ್ತೆ ಬಿಸಾಕಿದ ಜನ.. ಇನ್ನು ಬೆತ್ತಲಾಗಿ ಉರುಳಾಡುವವನ್ನ ಆಸ್ಪತ್ರೆಗೆ ಕೊಂಡೊಯ್ಯದೆ ಖ್ಯಾತೆ ತೆಗೆದು ನಿಂತಿರೋ ಪೊಲೀಸರು.. ಹೌದು ಈ ಹೃದಯವಿದ್ರಾವಕ ಘಟನೆ ನಡೆದಿರೋದು ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ.

ವಿಜಯಪುರ, (ಜ.21): ಜನರಲ್ಲಿ ಮಾನವೀಯತೆ ಅನ್ನೋದು ಸತ್ತು ಹೋಗಿದಿಯಾ? ಗುಮ್ಮಟನಗರಿ ವಿಜಯಪುರದಲ್ಲಿ ನಡೆದ ಘಟನೆಯೊಂದನ್ನ ನೋಡ್ತಿದ್ರೆ ಇಂಥಹ ಅನುಮಾನವೊಂದು ಕಾಡತೊಡಗಿದೆ. 

ವಿಜಯಪುರ: ಚರಂಡಿ ನೀರಿನಲ್ಲಿ ಈಜಾಡಿದ ಯುವಕ, ವಿಡಿಯೋ ವೈರಲ್

ಪಬ್ಜಿ ಗೀಳಿಗೆ ಬಿದ್ದ ಯುವಕನೊಬ್ಬ ಮಾನಸಿಕ ಅಸ್ವಸ್ಥನಾಗಿ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಕಲ್ಲು ಎಸೆದ ಅನ್ನೋ ಕಾರಣಕ್ಕೆ ಆತನನ್ನ ಥಳಿಸಿ ಕಟ್ಟಿಹಾಕಲಾಗಿದೆ. ಜೊತೆಗೆ ಆತ ಸಂಪೂರ್ಣ ಬೆತ್ತಲಾಗಿದ್ರು, ಕೊಂಚವು ಮಾನವೀಯತೆ ತೋರದೆ ರಸ್ತೆಯಲ್ಲಿ ಬಿಸಾಡಿದ ಘಟನೆ ನಡೆದಿದೆ. 

Video Top Stories