ಬೆಳಗಾವಿ: ಮನೆ ಬಿದ್ದು 1 ವರ್ಷವಾದ್ರೂ ಸಿಕ್ಕಿಲ್ಲ, ದಿನನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿರುವ ವೃದ್ಧೆ
ಮನೆ ಕುಸಿದು ಒಂದು ವರ್ಷವಾದರೂ ಸಿಗದ ಪರಿಹಾರ| ಬೆಳಗಾವಿ ಜಿಲ್ಲೆಯಲ್ಲಿ ನಡೆದ ಘಟನೆ| ಕಳೆದ ವರ್ಷ ಭೀಕರ ಪ್ರವಾಹದಲ್ಲಿ ನಾಗವ್ವ ಎಂಬ ವೃದ್ಧೆಯ ಮನೆ ಕುಸಿದಿತ್ತು| ಕೇವಲ 10 ಸಾವಿರ ರೂ. ನೀಡಿದ್ದ ಅಧಿಕಾರಿಗಳು|
ಬೆಳಗಾವಿ(ಆ.27): ಮನೆ ಕುಸಿದು ಒಂದು ವರ್ಷವಾದರೂ ಕೂಡ ಇನ್ನೂ ಪರಿಹಾರ ಮಾತ್ರ ಸಿಕ್ಕಿಲ್ಲ. ಹೌದು, ಇಂತಹ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಕಳೆದ ವರ್ಷ ಬಂದ ಭೀಕರ ಪ್ರವಾಹದಲ್ಲಿ ನಾಗವ್ವ ಎಂಬ ವೃದ್ಧೆಯ ಮನೆ ಕುಸಿದಿತ್ತು. ಆ ಸಂದರ್ಭದಲ್ಲಿ ಕೇವಲ 10 ಸಾವಿರ ರೂ. ನೀಡಿದ್ದರು.
ಯಾದಗಿರಿ: ಸಚಿವ ಅಶೋಕ್ ಕಾಟಾಚಾರಕ್ಕೆ ನೆರೆ ವೀಕ್ಷಣೆ, ಎರಡೇ ನಿಮಿಷಯದಲ್ಲಿ ಎಲ್ಲವೂ ಮುಗೀತು..!
ಇದಾದ ಬಳಿಕ ಮನೆ ಕುಸಿದು ಒಂದು ವರ್ಷವಾದರೂ ಕೂಡ ಯಾವುದೇ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಅಧಿಕಾರಿಗಳ ಬೇಜವ್ದಾರಿಗೆ ವೃದ್ಧೆ ಪ್ರತದಿನ ಕಣ್ಣೀರಲ್ಲಿ ಕೈತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.