Asianet Suvarna News Asianet Suvarna News

ದೇವರ ಗುಡಿಗೆ ಇನ್ಮುಂದೆ ರೈತ ಬೆಳೆದ ಬೆಳೆ: ಪ್ರಸಾದ, ನೈವೇದ್ಯಕ್ಕೆ ಹಾಪ್‌ ಕಾಮ್ಸ್‌ ಹಣ್ಣು, ತರಕಾರಿ !

ರೈತರು ಬೆಳೆದ ಹಣ್ಣು ಮತ್ತು ತರಕಾರಿ ಇನ್ಮುಂದೆ ದೇವರ ಸನ್ನಿಧಾನ ತಲುಪಲಿದೆ. ಹೌದು, ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಹಾಪ್‌ ಕಾಮ್ಸ್‌ನಿಂದ ಹಣ್ಣು, ತರಕಾರಿ ಖರೀದಿಸುವಂತೆ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. 
 

First Published Jun 24, 2023, 11:05 AM IST | Last Updated Jun 24, 2023, 11:05 AM IST

ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಪ್ರಸಾದ ಮತ್ತು ನೈವೇದ್ಯಕ್ಕೆ ಇನ್ಮುಂದೆ ಹಾಪ್‌ ಕಾಮ್ಸ್‌ ಹಣ್ಣು ಮತ್ತು ತರಕಾರಿ ಬಳಸುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಈ ಸಂಬಂಧ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಹಾಪ್‌ ಕಾಮ್ಸ್‌ ಸರ್ಕಾರಿ ಸಂಸ್ಥೆಯಾಗಿದ್ದು, ಇಲ್ಲಿಂದ ಜನ ಹಣ್ಣು, ಹೂ ಖರೀದಿಸುವುದರಿಂದ ರೈತರಿಗೆ ಲಾಭ ಆಗಲಿದೆ. ಈ ಬಗ್ಗೆ ದೇವಸ್ಥಾನಗಳಿಗೂ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?