
ಜಿಹಾದಿಗಳೆಂದು ಅಪಪ್ರಚಾರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮುಸ್ಲಿಂ ವರ್ತಕರು
ಬೆಂಗಳೂರಿನಲ್ಲಿ ಧರ್ಮ ದಂಗಲ್ ಶುರುವಾಗಿದ್ದು, ಪ್ರಮುಖ ರಸ್ತೆಯಲ್ಲಿ ವ್ಯಾಪಾರ ಸಮರದ ಕಿಡಿ ಹೊತ್ತಿಕೊಂಡಿದೆ.
ಬೆಂಗಳೂರಿನ ಎಸ್.ಪಿ ರೋಡ್ ವ್ಯಾಪಾರಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ಜಿಹಾದಿಗಳೆಂದು ಅಪಪ್ರಚಾರ ಮಾಡಲಾಗಿದ್ದು, ಎಸ್.ಪಿ ರೋಡ್'ನಲ್ಲಿ ಧರ್ಮ ವಾರ್ಗೆ ಕಿಡಿಗೇಡಿಗಳ ಪಿತೂರಿ ನಡೆದಿದೆ. ಎಲ್ಲಾ ಧರ್ಮದವರು ಅಣ್ಣ-ತಮ್ಮಂದಿರಂತೆ ವ್ಯಾಪಾ ಮಾಡುತ್ತೇವೆ. ಅನಗತ್ಯ ವಿವಾದ ಸೃಷ್ಟಿಸಿ ಧರ್ಮ ಒಡೆಯುವ ಕೆಲಸ ಆಗ್ತಿದೆ. ವ್ಯಾಪಾರ ಮಾಡಿ ದುಡ್ಡು ಗಳಿಸಿ ಬಳಿಕ ಜಿಹಾದಿಗಳಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರವೆಂದು ಆರೋಪ ಮಾಡಲಾಗಿದೆ. ಅಪಪ್ರಚಾರ ನಡೆಸಿದವರ ವಿರುದ್ಧ ವರ್ತಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ