
ಪರಿಸರ ಸಂರಕ್ಷಣೆಗೆ ಬದ್ಧವಾದ ಎಂಆರ್ಪಿಎಲ್: ಉಪನದಿಗಳ ಪುನಶ್ಚೇತನಕ್ಕೆ ಬೃಹತ್ ಯೋಜನೆ ಜಾರಿ
ಎಂಆರ್ಪಿಎಲ್ ಕಂಪನಿ ಅರಣ್ಯ ಇಲಾಖೆ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದೆ.
ಮಂಗಳೂರು: ಪರಿಸರ ಸಂರಕ್ಷಣೆಗೆ ಎಂಆರ್ಪಿಎಲ್ ಕಂಪನಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಕಂಪನಿ ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪರಿಸರ ಸಂಕರಕ್ಷಣೆಗೆ ಸುಮಾರು 19.40 ಕೋಟಿ ವಿನಿಯೋಗ ಮಾಡಲು ಮುಂದಾಗಿದೆ. ಅಲ್ಲದೇ ಉಪನದಿಗಳ ಪುನಶ್ಚೇತನಕ್ಕೆ ಬೃಹತ್ ಯೋಜನೆಗಳನ್ನು ರೂಪಿಸಿದೆ.ನದಿಗಳ ಕಿನಾರೆಯನ್ನು ಸ್ವಚ್ಛಗೊಳಿಸಿ, ಮ್ಯಾಂಗ್ರೋವ್ ಬೆಳೆಸಲು ನಿರ್ಧರಿಸಿದೆ. ಜೊತೆಗೆ ಗೃಹ ಹಾಗೂ ಕೈಗಾರಿಕೆ ತ್ಯಾಜ್ಯಗಳಿಂದ ಪರಿಸರವನ್ನು ರಕ್ಷಿಸಲು ಉತ್ತಮ ಯೋಜನೆಗಳನ್ನು ರೂಪಿಸಿದೆ. ಪರಿಸರ ದಿನಾಚರಣೆ ಅಂಗವಾಗಿ ಎಂಆರ್ಪಿಎಲ್ ಕಂಪನಿ ಈ ಕೆಲಸವನ್ನು ಮಾಡುತ್ತಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Rashi Bhavishya: ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಿದ್ದು,ಶಿವನ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ, ಒಳಿತಾಗಲಿದೆ..