Asianet Suvarna News Asianet Suvarna News

Rashi Bhavishya: ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಿದ್ದು,ಶಿವನ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ, ಒಳಿತಾಗಲಿದೆ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ,ಗುರುವಾರ,   ದ್ವಾದಶಿ ತಿಥಿ, ಭರಣಿ ನಕ್ಷತ್ರ .  

ಈ ದಿನ ರವಿ ಸಂಕ್ರಮಣ ಇದ್ದು, ಇಷ್ಟು ದಿನ ಶತ್ರು ಕ್ಷೇತ್ರದಲ್ಲಿ ಇದ್ದ ರವಿ. ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಈ ರಾಶಿಯಲ್ಲಿ ಸೂರ್ಯನ ಸಂಕ್ರಮಣವಾದ್ರೆ, ಇದು ಬಹಳ ವಿಶೇಷವಾದದ್ದಾಗಿದೆ. ಇದು ಮಳೆಯ ಸೂಚಕವಾಗಿದೆ. ಈ ಸಮಯದಲ್ಲಿ ತುಂಬಾ ಮಳೆಯಾಗಲಿದೆ. ಇಂದು ಸೂರ್ಯನಿಗೆ ಪ್ರಾರ್ಥನೆ ಮಾಡಿ, ಶಿವನ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ. ಇದರಿಂದ ನಿಮ್ಮ ಆರೋಗ್ಯ ಮತ್ತು ಮನಸ್ಸು ಚೆನ್ನಾಗಿರಲಿದೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಆಕ್ರೋಶದ ಬೆನ್ನಲ್ಲೇ ಜಮೀರ್ ಟ್ವೀಟ್ ಡಿಲೀಟ್, ಅನ್ನ ಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್!

Video Top Stories