Asianet Suvarna News Asianet Suvarna News

ಕ್ವಾರಂಟೈನ್‌ ಕೇಂದ್ರದಿಂದ ಪರಾರಿಯಾಗಲು ಕಾರ್ಮಿಕನ ಯತ್ನ: ಹಿಡಿಯಲು ಹೋದ ASI ಮೇಲೆ ಹಲ್ಲೆ

ಕ್ವಾರಂಟೈನ್‌ನಲ್ಲಿದ್ದ ಕಾರ್ಮಿಕನಿಂದ ಕಿರಿಕ್‌|  ಯಾದಗಿರಿ ಜಿಲ್ಲೆಯ ಹುಣಸಗಿ ಪರತನಾಯ್ಕ್‌ ತಾಂಡಾದಲ್ಲಿ ನಡೆದ ಘಟನೆ| ಮಹಾರಾಷ್ಟ್ರದಿಂದ ಕಾರ್ಮಿಕನನ್ನ ಕ್ವಾರಂಟೈನ್‌ ಮಾಡಲಾಗಿತ್ತು| ಕಾರ್ಮಿಕನನ್ನ ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ|

ಯಾದಗಿರಿ(ಮೇ.20): ಕ್ವಾರಂಟೈನ್‌ನಲ್ಲಿದ್ದ ಕಾರ್ಮಿಕನೋರ್ವ ಪರಾರಿಯಾಗಲು ಯತ್ನಿಸಿದ ಘಟನೆ ಜಿಲ್ಲೆಯ ಹುಣಸಗಿ ಪರತನಾಯ್ಕ್‌ ತಾಂಡಾದಲ್ಲಿ ಇಂದು(ಬುಧವಾರ) ನಡೆದಿದೆ.  ಕಾರ್ಮಿಕನನ್ನ ಹಿಡಿಯಲು ಹೋದ ಕೊಡೇಕಲ್‌ ಎಎಸ್‌ಐ ಭೀಮಾಶಂಕರ್‌ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ. 

ರಾಯಚೂರು ಬಸ್‌ ನಿಲ್ದಾಣದಲ್ಲಿ ಜನವೋ ಜನ: ಮಕ್ಕಳ ಪ್ರಯಾಣಕ್ಕೆ ಅಧಿಕಾರಿಗಳ ತಡೆ

ಮಹಾರಾಷ್ಟ್ರದಿಂದ ಈ ಕಾರ್ಮಿಕನನ್ನ ಕ್ವಾರಂಟೈನ್‌ ಮಾಡಲಾಗಿತ್ತು. ಇವನ ಜೊತೆ ಸಾಕಷ್ಟು ಮಂದಿಯನ್ನ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿದೆ. ಆದರೆ, ಈ ಕಾರ್ಮಿಕ ಮಾತ್ರ ಕ್ವಾರಂಟೈನ್‌ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 

Video Top Stories