
ರಾಯಚೂರು ಬಸ್ ನಿಲ್ದಾಣದಲ್ಲಿ ಜನವೋ ಜನ: ಮಕ್ಕಳ ಪ್ರಯಾಣಕ್ಕೆ ಅಧಿಕಾರಿಗಳ ತಡೆ
ಮಕ್ಕಳ ಪ್ರಯಾಣಕ್ಕೆ ಸಾರಿಗೆ ಅಧಿಕಾರಿಗಳ ನಿರಾಕರಣೆ| ಬಸ್ ಹತ್ತುಲು ನೂಕುನುಗ್ಗಲು| ಮುಖಕ್ಕೆ ಮಾಸ್ಕ್ ಧರಿಸಿದ ಪುಟ್ಟ ಪುಟ್ಟ ಮಕ್ಕಳು|
ರಾಯಚೂರು(ಮೇ.20): ಸಾರಿಗೆ ಬಸ್ನಲ್ಲಿ ಮಕ್ಕಳ ಪ್ರಯಾಣಕ್ಕೆ ಅಧಿಕಾರಿಗಳು ನಿರಾಕರಿಸಿದ ಘಟನೆ ಇಂದು(ಬುಧವಾರ) ನಡೆದಿದೆ. ಕೊರೋನಾ ಸೋಂಕು ಇರುವ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ವೃದ್ಧರು ಪ್ರಯಾಣಿಸಬೇಡಿ ಎಂದು ರಾಜ್ಯ ಸರ್ಕಾರ ತಾಕೀತು ಮಾಡಿದೆ.
Add Asianetnews Kannada as a Preferred Source

ಎಲ್ಲೋ ಬಸ್ ನಿಲ್ಲಸಿದ್ರೆ ಮಕ್ಕಳು, ಮಹಿಳೆಯರು ಏನ್ ಮಾಡ್ಬೇಕು? KSRTC ಅಧಿಕಾರಿಗೆ ಪ್ರಯಾಣಿಕರ ತರಾಟೆ
ಮಕ್ಕಳು ತಾಯಿಯೊಂದಿಗೆ ತಮ್ಮ ಊರುಗಳಿಗೆ ಹೋಗುವ ಧಾವಂತದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪುಟ್ಟ ಪುಟ್ಟ ಮಕ್ಕಳೂ ಸಹ ಮುಖಕ್ಕೆ ಮಾಸ್ಕ್ಗಳನ್ನ ಹಾಕಿಕೊಂಡಿದ್ದಾರೆ. ಆದರೂ ಕೂಡ ಅಧಿಕಾರಿಗಳು ಮಾತ್ರ ಮಕ್ಕಳ ಪ್ರಯಾಣಕ್ಕೆ ನಿರಾಕರಿಸಿದ್ದಾರೆ.