
Nanna votu nanna matu: ನಮ್ಮ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿಲ್ಲ: ವಿಜಯಪುರದ ರೈತರು
ಚುನಾವಣೆ ಹಾಗೂ ರಾಜಕೀಯ ನಾಯಕರ ಬಗ್ಗೆ ವಿಜಯಪುರ ಜಿಲ್ಲೆಯ ರೈತರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಸುವರ್ಣ ನ್ಯೂಸ್'ನ ನನ್ನ ವೋಟು ನನ್ನ ಮಾತು ವಿಶೇಷ ಕಾರ್ಯಕ್ರಮದಡಿ ವಿಜಯಪುರ ಜಿಲ್ಲೆಯ ರೈತರು ಮಾತನಾಡಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಗೊತ್ತಿದೆ, ಆದರೆ ಯಾರು ಏನೂ ಮಾಡುತ್ತಿಲ್ಲ. 10 ವರ್ಷಗಳಿಂದ ನಮ್ಮಲ್ಲಿ ಅಭಿವೃದ್ಧಿಯಾಗಿಲ್ಲ. ರೈತರಿಗೆ ನೀರಿನ ಸಲುವಾಗಿ ಸಮಸ್ಯೆಯಾಗಿದೆ. ಯಾರೇ ಅಧಿಕಾರಕ್ಕೆ ಬಂದ್ರೂ ಇಲ್ಲಿ ಕೆಲಸ ಮಾತ್ರ ಆಗಲ್ಲ. ಕೆನಾಲ್ ಕೆಲಸ ಇದೆ, ಹಾಗೂ ರೋಡ್ ಕೆಲಸ ಕೂಡ ಇದೆ. ಯಾವುದನ್ನು ಕೂಡ ಸರಿಯಾಗಿ ಮಾಡಿಲ್ಲ ಎಂದು ರೈತರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.