Asianet Suvarna News Asianet Suvarna News

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಕಡೆಗಣನೆ

ಉಡುಪಿ ಕೃಷ್ಣಮಠದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿದೆ. ಕನ್ನಡ ಫಲಕ ತೆರವಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಬೆಂಗಳೂರು (ಡಿ. 01): ಉಡುಪಿ ಕೃಷ್ಣಮಠದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿದೆ. ಕನ್ನಡ ಫಲಕ ತೆರವಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಯೋಗೇಶ್ವರ್‌ಗೆ ಯೋಗ: ಸಿಎಂ ಆಪ್ತ ರೇಣುಕಾಚಾರ್ಯಗೆ ಮುಖಭಂಗ..!

'ಮಠದ ಪುನರುಜ್ಜೀವನದ ಸಂದರ್ಭದಲ್ಲಿ ಕನ್ನಡ ತುಳು ಹಾಗೂ ಸಂಸ್ಕೃತದಲ್ಲಿ ಫಲಕಗಳನ್ನು ಹಾಕುವುದು ನಮ್ಮ ಇರಾದೆಯಾಗಿತ್ತು. ತುಳು ಹಾಗೂ ಸಂಸ್ಕೃತ ಬೋರ್ಡ್ ಸಿದ್ಧವಾಗಿದ್ದರಿಂದ ಅದನ್ನ ಹಾಕಿದ್ದೇವೆ. ಕನ್ನಡದ್ದನ್ನು ಶೀಘ್ರದಲ್ಲೇ ಹಾಕಲಿದ್ದೇವೆ' ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.