Asianet Suvarna News Asianet Suvarna News

ಭವಿಷ್ಯ ನುಡಿದ ಕಾಲ ಭೈರವೇಶ್ವರನ ಶ್ವಾನ: ಮೋದಿ, ರಾಹುಲ್ ಗಾಂಧಿ ಪೋಟೊದಲ್ಲಿ ಸೆಲೆಕ್ಟ್ ಮಾಡಿದ್ದು ಯಾರನ್ನು?

ಮೈಸೂರಿನ ಕಾಲಬೈರವೇಶ್ವರ ದೇವಸ್ಥಾನದಲ್ಲಿ ಶ್ವಾನ ಭವಿಷ್ಯ ನುಡಿದಿದ್ದು, ಮೋದಿ ಹಾಗೂ ರಾಹುಲ್ ಗಾಂಧಿ ಪೋಟೊವನ್ನ ಕಾಲಭೈರವೇಶ್ವರ ದೇವರ ಮುಂದೆ ಇಟ್ಟು ಯಾರು ಪ್ರಧಾನಿ ಆಗುತ್ತಾರೆ ಎಂದು ಅರ್ಚಕರು ಹೇಳಿದಾಗ ಈ ಶ್ವಾನ ಭವಿಷ್ಯ ನುಡಿದಿದೆ.

First Published Jun 2, 2024, 3:05 PM IST | Last Updated Jun 2, 2024, 3:06 PM IST

ಕಾಲ ಭೈರವೇಶ್ವರನ (Kalabhairaveshwara) ಶ್ವಾನ ಭವಿಷ್ಯ ನುಡಿದಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತರೆ ಎಂದು ತಿಳಿಸಿದೆ. ಮೈಸೂರಿನ ಕಾಲಬೈರವೇಶ್ವರ ದೇವಸ್ಥಾನದಲ್ಲಿ ಶ್ವಾನ ಈ ಭವಿಷ್ಯ ಹೇಳಿದ್ದು,ಮೋದಿ (Narendra Modi) ಹಾಗೂ ರಾಹುಲ್ ಗಾಂಧಿ (Rahul Gandhi) ಪೋಟೊವನ್ನ ಕಾಲಭೈರವೇಶ್ವರ ದೇವರ ಮುಂದೆ ಇಟ್ಟು,ಈ ಬಾರಿ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನ ನಮ್ಮ ಭೈರವ ತಿಳುಸುತ್ತಾನೆ ಎಂದು ಅರ್ಚಕರು ಹೇಳಿದ್ದಾರೆ. ನಂತರ ಫೋಟೊವನ್ನ ಅದಲು ಬದಲು ಮಾಡಿ ಇಟ್ಟಿದ್ದಾರೆ. ನಂತರದಲ್ಲಿ ಫೋಟೊವನ್ನ ಭೈರವೇಶ್ವರ ಶ್ವಾನ ಬಾಯಿಯಿಂದ ಕಚ್ಚಿಕೊಂಡು ಬಂದಿದೆ. ಇದರೊಂದಿಗೆ ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆಂದು ಭೈರವೇಶ್ವರ ಶ್ವಾನ ಭವಿಷ್ಯ ನುಡಿದಿದೆ.ಈ ವೇಳೆ ಯದುವೀರ್ (Yaduveer) ಫೋಟೊವನ್ನು ಭೈರವೇಶ್ವರ ಶ್ವಾನ (Bhairaveshwara dog) ಸೆಲೆಕ್ಟ್ ಮಾಡಿದೆ.

ಇದನ್ನೂ ವೀಕ್ಷಿಸಿ:  ದಲಿತ ಹಿಂದುಳಿದ ಜನರ ಪರವಾಗಿದ್ದೇವೆ ಎನ್ನುವ ಸಿದ್ದರಾಮಯ್ಯ ಹಣ ಲೂಟಿ ಹೊಡೆದ್ರು‌ ಮಾತನಾಡ್ತಿಲ್ಲ: ಶ್ರೀರಾಮುಲು