
ಹನಿಟ್ರ್ಯಾಪ್ ಬಲೆಗೆ ಬಿದ್ದು ಅಕ್ರಮಕ್ಕೆ ಒಪ್ಪಿದ್ರಾ ಸಚಿವರು, ಶಾಸಕರು? ಆರೋಪಿ ಸತ್ಯನಿಗೂ ಬೋಸರಾಜುಗೂ ಸಂಬಂಧವೇನು?
ವಾಲ್ಮೀಕಿ ನಿಗಮ ಹಗರಣದಲ್ಲಿ ಹನಿಟ್ರ್ಯಾಪ್ಗೆ ಒಳಗಾಗಿ ಸಚಿವರು, ಶಾಸಕರು ಅಕ್ರಮವೆಸಗಿದ್ದಾರೆ ಎನ್ನಲಾಗ್ತಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ (Valmiki Corporation scam) ಹನಿಟ್ರ್ಯಾಪ್ ಬಾಂಬ್ ಸದ್ದು ಜೋರಾಗಿ ಕೇಳಿಬಂದಿದೆ. ವಾಲ್ಮೀಕಿ ಹಗರಣ ಕುರಿತು ಸಿ.ಟಿ ರವಿ (CT Ravi) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆರೋಪಿ ಸತ್ಯ ನಾರಾಯಣ್ ವೃತ್ತಿಪರ ‘ಡ್ಯಾಷ್’, ಆತನಿಗೆ ಸಹಕಾರ ಕೊಟ್ಟಿದ್ದು ನಮ್ಮ ರಾಜ್ಯದ ಶಾಸಕರು. ನಮಗಿರುವ ಮಾಹಿತಿ.. ಇದೊಂದು ವೃತ್ತಿಪರ ಜಾಲವಾಗಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ. ಹನಿಟ್ರ್ಯಾಪ್(Honeytrap) ಮೂಲಕ ಬೆದರಿಸಿ ಹಗರಣ ಮಾಡಿದ್ದಾರೆ. ಇದೇ ಹಣವನ್ನ ಪಾರ್ಟಿ ಫಂಡ್ ಅಂತಾ ಕೊಟ್ಟಿದ್ದಾರೆ. ಈ ಪ್ರಕರಣ ಹಳ್ಳ ಹಿಡಿಯಬಾರದು ಎಂದ ಸಿಟಿ ರವಿ ಒತ್ತಾಯಿಸಿದರು. ರಾಜ್ಯ ಸರ್ಕಾರ ನಾಗೇಂದ್ರ ಅವರನ್ನು ಏಕೆ ರಕ್ಷಣೆ ಮಾಡುತ್ತಿದೆ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಸಂತನ ಸ್ಫೋಟಕ ಮಾತು..ಕಾಂಗ್ರೆಸ್ ಕೋಟೆಯೊಳಗೆ ಬಿರುಗಾಳಿ! ಏನಿದು ಒಕ್ಕಲಿಗ ಸ್ವಾಮೀಜಿ ಹೇಳಿದ ಧರ್ಮ ಮಾರ್ಗ ರಹಸ್ಯ..?