ಮಾನವೀಯತೆ ಮರೆತ್ರಾ ಬೆಳಗಾವಿ ಪೊಲೀಸರು?: ತಮ್ಮ ವಾಹನದಿಂದ ಅಪಘಾತ ಆದ್ರೂ ಡೋಂಟ್‌ ಕೇರ್‌

*  ಸರಿಯಾದ ಚಿಕಿತ್ಸೆ ಸಿಗದ ಹಿನ್ನಲೆ ಖಾಸಗಿ ಆಸ್ಪತ್ರೆಗೆ ತೆರಳಿರುವ ಗಾಯಗಳು
*  ಅಥಣಿ ಪೊಲೀಸರ ಬೇಜವಾಬ್ದಾರಿ ತನಕ್ಕೆ ಆಕ್ರೋಶ ಹೊರ ಹಾಕುತ್ತಿರುವ ಕುಟುಂಬ
*  ಬೈಕ್ ಹಿಂಬದಿಗೆ ಪೊಲೀಸ್ ಹೈವೇ ವಾಹನ ಡಿಕ್ಕಿ 

Share this Video
  • FB
  • Linkdin
  • Whatsapp

ಚಿಕ್ಕೋಡಿ(ಸೆ.30):  ತಮ್ಮದೆ ವಾಹನದಿಂದ ಅಪಘಾತ ನಡೆಸಿ ಪೊಲೀಸರು ಹಿಂತುರಿಗಿಯುವ ನೋಡದ ಹೋದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಬಳಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 112 ಹೈವೆ ಪ್ಯಾಟ್ರೋಲ್ ವಾಹನ್ ಬೈಕ್ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ನ್ಯಾಯ ಕೊಡಿಸುವಂತೆ ಅಪಘಾತಕ್ಕೆ ಒಳಗಾದ ಕುಟುಂಬ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಘಟನೆಯಲ್ಲಿ ಸಂಕೋನಟ್ಟಿ ಗ್ರಾಮದ ವಚಲಾ ಶಂಕರ್ ಮಗದುಮ್ (70) ಗುರುಲಿಂಗ ಶಂಕರ್ ಮಗದುಮ್ (50) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಕಾಟಾಚಾರಕ್ಕೆ ಎಂಬತೆ ಪೊಲೀಸರು ಗಾಯಾಳುಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಕೈತೊಳೆದುಕೊಂಡಿದ್ದರು. 

Add Asianetnews Kannada as a Preferred SourcegooglePreferred

ಬುಡಕಟ್ಟು ಜನಾಂಗದ ಅಪರೂಪದ ಪ್ರತಿಭೆಗೆ ಕೃಷ್ಣಮಠ ವೇದಿಕೆ

Related Video