
ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್: ಮೂರು ದಿನ KSRTC ಬಸ್ ಸಂಚಾರ ಉಚಿತ..!
ಬಸ್ಗಳಲ್ಲಿ ಮಾಮೂಲಿ ದರಕ್ಕಿಂತ ಡಬಲ್ ಟಿಕೆಟ್ ದರ| ಬಡ ಕಾರ್ಮಿಕರಿಗೆ ಬಹಳ ತೊಂದರೆ| ಕಾರ್ಮಿಕರ ಪರವಾಗಿ ವರದಿ ಬಿತ್ತರಿಸಿದ್ದ ಸುವರ್ಣ ನ್ಯೂಸ್|ಕಾರ್ಮಿಕರು ಊರಿಗೆ ತೆರಳಲು ಉಚಿತವಾಗಿ ಬಸ್ಗಳ ವ್ಯವಸ್ಥೆ ಮಾಡಿದ ಸರ್ಕಾರ|
ಬೆಂಗಳೂರು(ಮೇ.03): ಲಾಕ್ಡೌನ್ ಸಡಿಲಗೊಳಿಸಿದ್ದರಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸರ್ಕಾರ ಸಾರಿಗೆ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಬಸ್ಗಳಲ್ಲಿ ಮಾಮೂಲಿ ದರಕ್ಕಿಂತ ಡಬಲ್ ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಇದರಿಂದ ಬಡ ಕಾರ್ಮಿಕರಿಗೆ ಬಹಳ ತೊಂದರೆಯುಂಟಾಗಿತ್ತು. ಹೀಗಾಗಿ ಕಾರ್ಮಿಕರ ಪರವಾಗಿ ಸುವರ್ಣ ನ್ಯೂಸ್ ವರದಿ ಬಿತ್ತರಿಸಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಡಿಗೆಗಾಗಿ ಬಡ ಕುಟುಂಬದ ಮೇಲೆ ಮನೆ ಮಾಲೀಕ ಹಲ್ಲೆ
ವರದಿ ಬಿತ್ತರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ವಲಸೆ ಕಾರ್ಮಿಕರು ಊರಿಗೆ ತೆರಳಲು ಉಚಿತವಾಗಿ ಬಸ್ಗಳ ವ್ಯವಸ್ಥೆ ಮಾಡಿದೆ. ಇಂದಿನಿಂದ ಮೂರು ದಿನ ಸಾರಿಗೆ ಬಸ್ ಸಂಚಾರ ಉಚಿತವಾಗಿರಲಿದೆ.
"