
ಭೀಮಾ ನದಿ ಪ್ರವಾಹಕ್ಕೆ ನಲುಗಿದ ಉತ್ತರ ಕರ್ನಾಟಕ: ಸಂತ್ರಸ್ತರ ರಕ್ಷಣೆಗೆ ಅರೆಸೇನಾ ಪಡೆ
ಸಂತ್ರಸ್ತರನ್ನ ಸುರಕ್ಷಿತವಾಗಿ ರಕ್ಷಿಸಲು ಬಂದ ಸೇನಾಪಡೆ| ತೆಲಂಗಾಣದ ಸಿಕಿಂದರಾಬಾದ್ನಿಂದ ಮೇಜರ್ ಮಾರ್ಟಿನ್ ಅರವಿಂದ ನೇತೃತ್ವದ 98 ಯೋಧರ ತಂಡ ಕಲಬುರಗಿ ಅಗಮನ| ಸೇನಾ ತುಕಡಿಯನ್ನ ಬರಮಾಡಿಕೊಂಡ ಅಪರ ಜಿಲ್ಲಾಧಿಕಾರಿ|
ಕಲಬುರಗಿ(ಅ.18): ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರನ್ನ ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಂತ್ರಸ್ತರನ್ನ ಸುರಕ್ಷಿತವಾಗಿ ರಕ್ಷಿಸಲು ಸೇನಾಪಡೆ ಬಂದಿಳಿದಿದೆ.
Add Asianetnews Kannada as a Preferred Source

112 ವರ್ಷಗಳ ಹಿಂದೆ ಕೊಟ್ಟ ಸರ್ ಎಂವಿ ಎಚ್ಚರಿಕೆ : ಮರೆತಿದ್ದಕ್ಕೆ ಈಗ ಮುಳುಗಿದ ಮುತ್ತಿನ ನಗರಿ
ತೆಲಂಗಾಣದ ಸಿಕಿಂದರಾಬಾದ್ನಿಂದ ಮೇಜರ್ ಮಾರ್ಟಿನ್ ಅರವಿಂದ ನೇತೃತ್ವದ 98 ಯೋಧರ ತಂಡ ಕಲಬುರಗಿ ಅಗಮಿಸಿದೆ. ಪ್ರವಾಹದಲ್ಲಿ ಸಿಲುಕಿದವರನ್ನ ಈ ತಂಡ ರಕ್ಷಣೆ ಮಾಡಲಿದೆ. ಸೇನಾ ತುಕಡಿಯನ್ನ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರು ಬರಮಾಡಿಕೊಂಡಿದ್ದಾರೆ.