ನೀನು ಸರಿ ಇಲ್ಲ, ಮದುವೆ ಆಗಲ್ಲ ಎಂದ ಪ್ರಿಯಕರ: ಮನನೊಂದು ವೈದ್ಯೆ ಆತ್ಮಹತ್ಯೆ
ಬೆಂಗಳೂರಿನಲ್ಲಿ ಪ್ರೇಮ ವೈಫಲ್ಯದಿಂದ ಉತ್ತರ ಪ್ರದೇಶ ಲಕ್ನೋ ಮೂಲದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯ ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜಯ್ ನಗರದಲ್ಲಿ ಘಟನೆ ನಡೆದಿದೆ. ಪ್ರಿಯಾಂಶಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯಾಗಿದ್ದು, ಕಳೆದ ತಿಂಗಳು 25ರಂದು ಘಟನೆ ನಡೆದಿದೆ. ಡಾ. ಸುಮಿತ್ ಅವರನ್ನು ಪ್ರಿಯಾಂಶಿ ಪ್ರೀತಿಸುತ್ತಿದ್ದರು. ಪ್ರಿಯಾಂಶಿ ತ್ರಿಪಾಠಿ ಸರಿ ಇಲ್ಲ, ಮದುವೆ ಆಗಲ್ಲ ಎಂದು ಸುಮಿತ್ ಹೇಳಿದ್ದಾರೆ. ಇದರಿಂದ ಮನನೊಂದು ಪ್ರಿಯಾಂಶಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜಯ ನಗರದಲ್ಲಿ 306 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.