
ಕೊರೋನಾ ಸೋಂಕಿತರಿದ್ದ ಡೇಂಜರ್ ಏರಿಯಾಗಳಲ್ಲಿ ಡಿಸಿ ರಿಯಾಲಿಟಿ ಚೆಕ್
ಕೊರೋನಾ ಹಾಟ್ಸ್ಪಾಟ್ ಮಳವಳ್ಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ವೆಂಟಕೇಶ್| ಸುವರ್ಣ ನ್ಯೂಸ್ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿ| ಈದ್ಗಾ ಮೊಹಲ್ಲಾ, ಕೋಟೆ ಕಾಳಮ್ಮನ ಬೀದಿಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ|
ಮಂಡ್ಯ(ಏ.19): ಕೊರೋನಾ ಹಾಟ್ಸ್ಪಾಟ್ ಪ್ರದೇಶವಾದ ಜಿಲ್ಲೆಯ ಮಳವಳ್ಳಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಡಾ. ವೆಂಟಕೇಶ್ ಅವರು ಸುವರ್ಣ ನ್ಯೂಸ್ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜನರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಅರಿಯಲು ಡಿಸಿ ವೆಂಟಕೇಶ್ ರೌಂಡ್ ಹಾಕಿದ್ದಾರೆ.
Add Asianetnews Kannada as a Preferred Source

42 ಕೊರೋನಾ ಕೇಸ್ ಆದ್ರೂ ಬುದ್ದಿ ಕಲಿಯದ ಬೆಳಗಾವಿ ಜಿಲ್ಲಾಡಳಿತ: ಸಾಮಾಜಿಕ ಅಂತರ ಉಲ್ಲಂಘಣೆ..!
ಇದರ ಜೊತೆಗೆ ಕೊರೋನಾ ಸೋಂಕಿತರು ವಾಸವಿದ್ದ ಡೇಂಜರ್ ಏರಿಯಾಗಳಲ್ಲಿ ಡಾ. ವೆಂಟಕೇಶ್ ಅವರು ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈದ್ಗಾ ಮೊಹಲ್ಲಾ, ಕೋಟೆ ಕಾಳಮ್ಮನ ಬೀದಿಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.