Asianet Suvarna News Asianet Suvarna News

ಸಹವಾಸ ದೋಷದಿಂದಲೇ ದರ್ಶನ್‌ಗೆ ಈ ಗತಿ ಬಂತಾ..? ಅಭಿಮಾನ ಇರಬೇಕು..ಅಂಧಾಭಿಮಾನ ಇರಬಾರದು..!

ದರ್ಶನ್ ತೂಗುದೀಪ ನಾಯಕ - ಖಳನಾಯಕನಾಗಿದ್ದು ಹೇಗೆ..?
ಅಭಿಮಾನಿಗಳಿಗೆ ಸ್ಫೂರ್ತಿಯಾಗಬೇಕಾದವ ವಿಲನ್ ಆದ ಕಥೆ..!
ತಂದೆ ರೀಲ್‌ನಲ್ಲಿ ವಿಲನ್..ಆದ್ರೆ ಮಗ ರಿಯಲ್‌ನಲ್ಲೇ ವಿಲನ್..!
 

First Published Jun 24, 2024, 5:03 PM IST | Last Updated Jun 24, 2024, 5:03 PM IST

ನಟ ದರ್ಶನ್‌ (Actor Darshan) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ಪರಪ್ಪನ ಅಗ್ರಹಾರ ಜೈಲು(Parappana Agrahara Jail) ಸೇರಿದ್ದಾರೆ. 13 ವರ್ಷಗಳ ನಂತರ ಜೈಲಿನ ದರ್ಶನವನ್ನು ಮಾಡಿದ್ದಾರೆ. ದರ್ಶನ್‌ ಕನ್ನಡದಲ್ಲಿ ಹೊಡಿಬಡಿ ಸಿನಿಮಾಗಳನ್ನೇ ನೀಡಿದ್ದು, ಅದನ್ನು ಅಭಿಮಾನಿಗಳು ಸಹ ಮೆಚ್ಚಿಕೊಂಡಿದ್ದರು. ಇನ್ನೂ ಕೊಲೆ ಪ್ರಕರಣದಲ್ಲಿ ದರ್ಶನ್‌ ನಂಬಿಕೊಂಡು ಬಂದಿರುವವರು ಸಹ ಇದೀಗ ಜೈಲು ಪಾಲಾಗಿದ್ದಾರೆ. ಮೊದಲು ಲೈಟ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ದರ್ಶನ್‌ ದಿನಕ್ಕೆ 170 ರೂಪಾಯಿ ದುಡಿಯುತ್ತಿದ್ದರು. ಮೆಜಿಸ್ಟಿಕ್‌ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ದರ್ಶನ್‌ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲದೇ ಈ ಸಿನಿಮಾ ಅವರ ಲೈಫ್‌ನನ್ನೇ ಬದಲಿಸಿತ್ತು.

ಇದನ್ನೂ ವೀಕ್ಷಿಸಿ:  Suraj Revanna: ಇದೇನಿದು ರೇವಣ್ಣ ಫ್ಯಾಮಿಲಿಗೆ ಸ್ತ್ರೀ..ಪುರುಷ ಕಂಟಕ..? ಕಾನೂನು ಕುಣಿಕೆಯಲ್ಲಿ ಸಿಲುಕಿದ ರೇವಣ್ಣ ಫ್ಯಾಮಿಲಿ..!